ಒಂದು ಪುರಾತನ ನೆಲದಲ್ಲಿ

Author : ಮಿತ್ರಾ ವೆಂಕಟ್ರಾಜ್

Pages 329

₹ 405.00




Year of Publication: 2024
Published by: ಮನೋಹರ ಗ್ರಂಥಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: +91 9845447002 / 0836-2441822

Synopsys

‘ಒಂದು ಪುರಾತನ ನೆಲದಲ್ಲಿ’  ಕೃತಿಯು ಪ್ರವಾಸ ಕಥನದ ಸೋಗಿನಲ್ಲಿರುವ ಚರಿತ್ರೆಯಾಗಿದ್ದು, ಮಿತ್ರಾ ವೆಂಕಟ್ರಾಜ ಅವರು ಅಮಿತಾವ್ ಘೋಷ್ ಅವರ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿನ ಸಾಲುಗಳು ಹೀಗಿವೆ; ಇದು ಕ್ರಿ.ಶ. 1130ರಲ್ಲಿ ಈಜಿಪ್ಟ್ ಮತ್ತು ಏಡನ್ನಾಗಿ ಭಾರತಕ್ಕೆ ಬಂದ ಮೂಲತಃ ಟ್ಯುನಿಸಿಯದವನಾದ ಯಹೂದಿ ವರ್ತಕ ಅಬ್ರಹಾಂ ಬೆನ್ ಜುವಿನ ಮತ್ತು ಈಜಿಪ್ಟಿನಲ್ಲಿದ್ದ ಇಬ್ಬರು ಭಾರತೀಯರ ಕತೆ, ಬೆನ್ ಉಜು ಮಂಗಳೂರಿನಲ್ಲಿ ಹದಿನೇಳು ವರ್ಷಗಳ ಕಾಲ ಇದ್ದು, ನಾಯರ್ ಹೆಂಗಸೊಬ್ಬಳನ್ನು ಮದುವೆಯಾಗಿ, ತುಳುನಾಡಿನವನಾದ ಬೊಮ್ಮ ಎಂಬ ಭಾರತೀಯ 'ಗುಲಾಮ'ನೊಬ್ಬನನ್ನು ಹೊಂದಿದ್ದ. ಬೊಮ್ಮನು - ಕೆಲವೊಮ್ಮೆ ಕುಡಿದು ಮತ್ತೇರಿ - ಬೆನ್ ಯಿಜು ಬರೆದ ಅಥವಾ ಅವನಿಗೆ ಬಂದ ಪತ್ರಗಳ ಬದಿಗಳಲ್ಲಿ ಕಾಣಿಸಿಕೊಳ್ಳುತ್ತಾನೆ ಹಾಗೂ ಅವನ ಯಜಮಾನನು ತನ್ನ ಕೊನೆಯ ದಿನಗಳಲ್ಲಿ ಈಜಿಪ್ಟಿಗೆ ಹಿಂದಿರುಗಿದಾಗ ಅವನ ಜೊತೆಯಲ್ಲೇ ಹೋಗಿದ್ದ. ಈಜಿಪ್ಟಿನಲ್ಲಿದ್ದ ಇನ್ನೊಬ್ಬ ಭಾರತೀಯನೆಂದರೆ ಅಮಿತಾವ್ ಘೋಷ್. ಚರಿತ್ರೆಯ ಅಡಿಟಿಪ್ಪಣಿಗಳಲ್ಲಿ ಕಾಪಿಡಲ್ಪಟ್ಟ ಬೊಮ್ಮನ ಚರಿತ್ರೆಯ ಜಾಡು ಹಿಡಿದು 1980ರಲ್ಲಿ ಅಲ್ಲಿಗೆ ಹೋಗಿದ್ದರು. ಸುಮಾರು ಹತ್ತು ವರ್ಷಗಳ ತನಕ ನಡೆದ ಈ ಹುಡುಕಾಟವು ಅಲೆಕ್ಸಾಂಡ್ರಿಯಾದಿಂದ ಎರಡು ಗಂಟೆಗಳಷ್ಟು ದಕ್ಷಿಣಕ್ಕಿರುವ ಸಣ್ಣ ಹಳ್ಳಿಯೊಂದರಲ್ಲಿ ಆರಂಭವಾಗುತ್ತದೆ. ಹಳ್ಳಿಯಲ್ಲಿ ಅವರ ಮಾರ್ಗದರ್ಶಿಗಳೆಂದರೆ ನೆರೆಹೊರೆಯವರು: ದೈತ್ಯಾಕಾರದ ಮನೆಮಾಲಿಕ ಅಬು-'ಆಲಿ, ಮಣಿ-ಕಣ್ಣಿನ ಸ್ಥಳೀಯ ವಾಕ್ಚತುರ ಖಮೀಸ್ ಎಂಬ ಇಲಿ, ಅವನ ಎದುರಾಳಿ ಇಮಾಮ್, ನೇಕಾರ ಝಫೈಲ್ ಮತ್ತು ನಬೀಲ; ಗಲ್ಫ್ ಯುದ್ಧದ ಆರಂಭದಿಂದಾಗಿ ಬಾಗ್ದಾದಿನಲ್ಲಿ ಸಿಕ್ಕಿಹಾಕಿಕೊಂಡ ಶಾಂತ ಸ್ವಭಾವದ ನಜೀಲನ ವೈಯುಕ್ತಿಕ ಪಾಡು ಈಜಿಪ್ಟಿನ ಮತ್ತು 'ಅಭಿವೃದ್ಧಿ ಹೊಂದುತ್ತಿರುವ ಜಗತ್ತಿ'ನ ವ್ಯಾಪಕ ಸ್ಥಿತಿಯನ್ನು ಹೇಳುವ ಬಗೆಯೂ ಇಲ್ಲಿದೆ. ಒಂದು ಪುರಾತನ ನೆಲದಲ್ಲಿ – ಇದೊಂದು ಪ್ರವಾಸೀ ಕಥನದ ಸೋಗಿನಲ್ಲಿರುವ ಬುಡಮೇಲು ಮಾಡುವ 5 ಚರಿತ್ರೆ, ವಿಪುಲವಾದ ವಿವರಣೆ, ಉಪಕತೆಗಳಿಂದ ತುಂಬಿದ ಈ ಪುಸ್ತಕವು ಧರ್ಮಯುದ್ಧದಿಂದ ಹಿಡಿದು ಆಪರೇಶನ್ ಡೆಸರ್ಟ್ ಸ್ಟೋರ್ಮ್‌ ವರೆಗಿನ ಈಜಿಪ್ಟಿನ ಆತ್ಮೀಯವಾದ ಮಾಂತ್ರಿಕ ಒಳನೋಟವನ್ನು = ಕೊಡುತ್ತದೆ. ಕೆಲವು ಶತಮಾನಗಳ ಹಿಂದಿನವರೆಗೂ ಪ್ರಚಲಿತವಿದ್ದು ಈಗ ಹಲವು ಸ್ಥಳಗಳಲ್ಲಿ - ವಿಭಜನೆಗೊಳಗಾಗಿರುವ, ಭಾರತೀಯರು ಮತ್ತು ಈಜಿಪ್ಟಿನವರು, ಮುಸ್ಲಿಂ ಮತ್ತು ಯಹೂದಿ, ಹಿಂದೂ ಮತ್ತು ಮುಸ್ಲಿಂ ಎಂದು ಒಂದರೊಳಗೊಂದು ಹೆಣೆದುಕೊಂಡ ಹಲವು ಸಣ್ಣ, ಅಸ್ಪಷ್ಟ ಚರಿತ್ರೆಗಳ ವಿಶದವಾದ ದರ್ಶನವನ್ನು ನೀಡುತ್ತದೆ. 1992ರಲ್ಲಿ ಬರೆದ ಈ ಕಾದಂಬರಿ 'ಇನ್ ಅನ್ ಆಂಟಿಕ್ ಲ್ಯಾಂಡ್' ಹೆಚ್ಚಿನ ವಿಮರ್ಶಕರಿಂದ ಘೋಷರ ಅತ್ಯಂತ ಪ್ರಮುಖ ಪುಸ್ತಕವೆಂದು ಪರಿಗಣಿಸಲ್ಪಟ್ಟಿದೆ. ಇದರಲ್ಲಿನ ಆತ್ಮೀಯ ಶೈಲಿ ಹಾಗೂ ಪ್ರಸಕ್ತ ಘರ್ಷಣೆಗಳನ್ನು ಬೆಳಕಿಗೆ ತರಲು ಚರಿತ್ರೆಯನ್ನು ಉಪಯೋಗಿಸಿದ ರೀತಿ ಮನತಟ್ಟುವಂತಿವೆ. ಇಲ್ಲಿ ಎರಡು ಸಮಾನಾಂತರವಾದ ನಿರೂಪಣೆಗಳಿವೆ: ಈಜಿಪ್ಟಿನ ಗ್ರಾಮ್ಯ ಪ್ರದೇಶಗಳಲ್ಲಿ ಪದವಿ ವಿದ್ಯಾರ್ಥಿಯಾಗಿ ಕ್ಷೇತ್ರಕಾರ್ಯ ಮಾಡುತ್ತಿರುವ ಘೋಷ್ ಹಾಗೂ ಪತ್ರಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ದಾಖಲಿಸಲ್ಪಟ್ಟ 12ನೇ ಶತಮಾನದ ಭಾರತೀಯ ಗುಲಾಮ ಬೊಮ್ಮ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಮಿತ್ರಾ ವೆಂಕಟ್ರಾಜ್
(11 July 1948)

ಕಥೆಗಾರ್ತಿ ಮಿತ್ರಾವೆಂಕಟ್ರಾಜ್  ಅವರು 1948 ಜುಲೈ 11 ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ‘ರುಕುಮಾಯಿ, ಹಕ್ಕಿ ಮತ್ತು ಅವಳು’ ಅವರ ಕಥಾಸಂಕಲನ, ಮೌಖಿಕ ಲೇಖನಗಳ ಸಂಕಲನ ಬೊಗಸೆಯಲ್ಲಿಟ್ಟು ಬೆಳಕು ತುಂಬಿ, ಮುಗಿಲು ಮಲ್ಲಿಗೆಯ ಎಟಕಿಸಿ ಮುಂತಾದ ಕೃತಿಗಳನ್ನು ರಚಿಸಿದ್ಧಾರೆ. ಕತೆಹೇಳೆ - ಮುಂಬೈ ಲೇಖಕಿಯರ ಕಥಾಸಂಕಲನ), ಬೆಳಕಿನೆಡೆಗೆ - ಮುಂಬೈ ಲೇಖಕಿಯರ ಲೇಖನಗಳ ಸಂಗ್ರಹ ಅವರ ಸಂಪಾದಿತ ಕೃತಿಗಳು. ಒಂದು ಬಸ್ಸಿಗೆ ಒಯ್ಯುವುದಿತ್ತು ಕಥೆಗೆ ದಿಲ್ಲಿಯ ಕಥಾಪ್ರಶಸ್ತಿ, ಹಕ್ಕಿ ಮತ್ತು ಅವಳು ಸಂಕಲನಕ್ಕೆ ರತ್ನಮ್ಮ ಹೆಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಮಹಿಳಾವರ್ಷದ ಪ್ರಶಸ್ತಿ, ...

READ MORE

Related Books