ಆದಿವಾಸಿಗಳ ಅಭಿವೃದ್ಧಿ

Author : ಎ.ಎಸ್. ಪ್ರಭಾಕರ

Pages 218

₹ 200.00




Year of Publication: 2024
Published by: ಆಕೃತಿ ಪುಸ್ತಕ
Address: 31/1, ನೆಲಮಹಡಿ, 12ನೇ ಮುಖ್ಯರಸ್ತೆ, ಗಾಯತ್ರಿನಗರ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560010
Phone: 098866 94580, 080-2340 9479

Synopsys

‘ಆದಿವಾಸಿಗಳ ಅಭಿವೃದ್ಧಿ’ ಡಾ. ಎ. ಎಸ್. ಪ್ರಭಾಕರ ಅವರ ಕೃತಿಯಾಗಿದೆ. ಇದಕ್ಕೆ ಎಚ್. ಕೆ. ಶಿವಲಿಂಗಸ್ವಾಮಿ ಅವರ ಬೆನ್ನುಡಿ ಬರಹವಿದೆ; ಬುಡಕಟ್ಟು ಸಮುದಾಯಗಳು ತಮ್ಮ ಅಸ್ತಿತ್ವವನ್ನು ಅಥವಾ ಪರಂಪರೆಯನ್ನು ಕಳೆದುಕೊಳ್ಳದೆ ರಾಷ್ಟ್ರದ ಪ್ರಗತಿಯಲ್ಲಿ ಭಾಗವಹಿಸಲು ಸಮಾನ ಮತ್ತು ನ್ಯಾಯಯುತ ಸಮಾಜವನ್ನು ರಚಿಸಲು ಪ್ರಯತ್ನಿಸಬೇಕು ಎಂಬ ನೆಹರು ಅವರ ಆಶಯವನ್ನು ಈ ಅನುವಾದಿತ ಕೃತಿ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಈ ಪಠ್ಯವನ್ನು ಓದುವವರಿಗೆ ಬುಡಕಟ್ಟು ಸಮುದಾಯಗಳ ಭೂಮಿಯ ಹಕ್ಕುಗಳನ್ನು ಗುರುತಿಸಲು ಮತ್ತು ರಕ್ಷಿಸಲು ನೆಹರು ಪ್ರಬಲವಾಗಿ ಪ್ರತಿಪಾದಿಸಿದ್ದರು ಎಂಬುದು ಮನವರಿಕೆಯಾಗುತ್ತದೆ. ನೆಹರೂ ಅವರ ರಾಜಕೀಯ ಧುರೀಣತೆಗೆ ಮತ್ತೊಂದು ಸಾಕ್ಷಿ ಎಂದರೆ ಸಾಕಷ್ಟು ಪರಿಹಾರವಿಲ್ಲದೆ ಮತ್ತು ಅವರ ಅನುಮೋದನೆಯಿಲ್ಲದೆ ಬುಡಕಟ್ಟು ಭೂಮಿಯನ್ನು ಅವರಿಂದ ಕಿತ್ತುಕೊಳ್ಳುವ ಅಥವಾ ಅಧಿಕಾರಯುತವಾಗಿ ಕಸಿದುಕೊಳ್ಳುವ ಕೆಲಸ ಮಾಡಬಾರದು ಎಂದು ಅವರು ನಂಬಿದ್ದರು. ಹಾಗೆಯೇ, ಬುಡಕಟ್ಟು ಸಮುದಾಯಗಳು ತಮ್ಮ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ಸ್ವಾಯತ್ತತೆಯ ಕಲ್ಪನೆಯನ್ನು ಬೆಂಬಲಿಸಿದರು. ಜವಾಹರಲಾಲ್ ನೆಹರು ಅವರ ಚಿಂತನೆಗಳ ಈ ಅನುವಾದಿತ ಆವೃತ್ತಿಯು ನೆಹರೂ ಅವರ ದೃಷ್ಟಿ, ಮೌಲ್ಯಗಳು ಮತ್ತು ನೀತಿಗಳ ಒಳನೋಟಗಳನ್ನು ಒದಗಿಸುತ್ತದೆ. ಅವುಗಳ ಮಹತ್ವವು ಇಂದಿಗೂ ಪ್ರಸ್ತುತವಾಗಿದೆ ಎಂದು ಸಾಬೀತುಪಡಿಸುತ್ತದೆ.

About the Author

ಎ.ಎಸ್. ಪ್ರಭಾಕರ
(29 April 1970)

ಎ.ಎಸ್‌. ಪ್ರಭಾಕರ ಅವರು ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯರಬಳ್ಳಿಯವರು. ಪ್ರಸ್ತುತ ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  26 ವರ್ಷಗಳ ಬೋಧನ ಅನುಭವ ಹೊಂದಿದ್ದು ಬುಡಕಟ್ಟು ಸಮುದಾಯಗಳ ಅಧ್ಯಯನ ಅವರ ವಿಶೇಷ ಪರಿಣತಿ ಕ್ಷೇತ್ರವಾಗಿದೆ. ಬುಡಕಟ್ಟು ಸಮುದಾಯಗಳ ಮೌಖಿಕ ಸಾಹಿತ್ಯ ಮತ್ತು ಪರಂಪರೆ, ಬುಡಕಟ್ಟು ಸಮುದಾಯಗಳ ಆಧುನಿಕ ಮುಖಾಮುಖಿ, ಬುಡಕಟ್ಟು ಸಮುದಾಯಗಳ ಅಭಿವೃದ್ದಿ ಮತ್ತು ಸಾಮಾಜಿಕ ಬದಲಾವಣೆ ಇವರ ಆಸಕ್ತಿಯ ಅಧ್ಯಯನದ ಕ್ಷೇತ್ರಗಳು.    ಕೃತಿಗಳು: ಮ್ಯಾಸ ಬೇಡರ ಕಥನಗಳು, ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು,  ಬುಡಕಟ್ಟು ಅಭಿವೃದ್ಧಿ ಮೀಮಾಂಸೆ, ಡೊಂಬರು: ಒಂದು ...

READ MORE

Related Books