ಜೀವನವು ಹರಿಯುವ ಒಂದು ನದಿಯಂತೆ. ಆ ನದಿಯ ನೀರು ಅಸಂಖ್ಯಾತ ಮಳೆ ಹನಿಗಳ ಒಗ್ಗೂಡುವಿಕೆಯಿಂದ ಆಗಿದೆ. ಜನರ ಜೀವನದ ನಾಡಿಯಾಗಿ ಪ್ರವಹಿಸುತ್ತಿರುತ್ತದೆ. ಅಲ್ಲಿ ನಮಗೆ ಸಿಗಬಹುದಾದ ಮುತ್ತು ರತ್ನಗಳು ಅಪಾರ. ಒಂದೊಂದನ್ನೇ ಆಯ್ದು ತಮ್ಮ ಬದುಕಿನ ಮರುಭೂಮಿಯಲ್ಲಿಟ್ಟುಕೊಂಡು ಬದುಕನ್ನು ಹಸನು ಮಾಡಿಕೊಳ್ಳುವ ಅದಮ್ಯ ಬಯಕೆಯಿಂದ ನಟವರ್ ಸಿಂಹ ಅವರು ಪ್ರಯತ್ನಿಸಿ ಅದರ ಫಲವನ್ನೆಲ್ಲಾ ಒಂದು ಕ್ರಮಕ್ಕೆ ಒಳಪಡಿಸಿ ಈ ಕೃತಿಯನ್ನು ರಚಿಸಿದ್ದಾರೆ. ಇದನ್ನು ಚಿರಂಜೀವಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.