ಖ್ಯಾತ ಲೇಖಕಿ ಅನುಪಮಾ ನಿರಂಜನ ಅವರ ಆತ್ಮಕತೆ ’ನೆನಪು-ಸಿಹಿಕಹಿ’. ಈ ಪುಸ್ತಕದ ಬರಹಗಳು ಮೊದಲ ಬಾರಿಗೆ ’ತರಂಗ’ ವಾರಪತ್ರಿಕೆಯಲ್ಲಿ ಸರಣಿಯಾಗಿ ಪ್ರಕಟವಾಗಿದೆ. ಈ ಪುಸ್ತಕದ ಬಗ್ಗೆ ಅನುಪಮಾ ಅವರು ’1982ರಲ್ಲಿ ಎರಡನೆಯ ಬಾರಿಗೆ ಕ್ಯಾನ್ಸರ್ಗೆಂದು ನನಗೆ ಶಸ್ತ್ರಕ್ರಿಯೆ ಆದಾಗ ನೋವು, ದುಗುಡಗಳಿಂದ ನಾನು ಬಸವಳಿದಿದ್ದೆ. ಹೆಚ್ಚು ದಿನ ಬದುಕುವುದಿಲ್ಲ ಎಂಬ ಗ್ರಹಿಕೆಯಿತ್ತು. ಜೀವನದುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಹೋರಾಟವೇ ನನಗಿದಿರಾಗಿತ್ತು. ವೈದ್ಯೆಯಾಗಿ, ಲೇಖಕಿಯಾಗಿ, ಪತ್ನಿಯಾಗಿ, ಮಾತೆಯಾಗಿ ನಾನು ಉಂಡ ಸಿಹಿ-ಕಹಿಗಳನ್ನು ನಾಲ್ಕು ಜನದ ಜೊತೆ ಹಂಚಿಕೊಂಡರೆ ನನ್ನ ಉಳಿದ ಬಾಳು ಸತ್ಯವಾಗಬಹುದೇನೋ ಎಂದು ತೋರಿತು. ಹಾಗೆ ಬರೆಯತೊಡಗಿದ್ದು ’ನೆನಪು: ಸಿಹಿ ಕಹಿ’.
ಅನುಪಮಾ ಅವರು ’ಬರಹಗಾರ್ತಿಯ ಬದುಕು’ ಎಂಬ ಮತ್ತೊಂದು ಪುಸ್ತಕ ಪ್ರಕಟಿಸಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು. ಕಥಾಸಂಕಲನಗಳು- ...
READ MORE