‘ಹೆಜ್ಜೆಗಳು’ ಡಾ. ವಾಣಿ ರಾವ್ ಅವರ ಆತ್ಮಚರಿತ್ರೆಯಾಗಿದೆ. ಇದಕ್ಕೆ ಪ್ರೊ. ರಮೇಶ್ ರಾವ್ ಹಾಗೂ ಡಾ. ಸುರೇಶ್ ರಾವ್ ಅವರ ಬೆನ್ನುಡಿ ಬರಹವಿದೆ: ಈ 90 ವಸಂತಗಳನ್ನು ಕಂಡ, ಅಂದಿನಿಂದ ಇಂದಿನವರೆಗೆ, ನಡೆದುಬಂದ, ವೈವಿದಧ್ಯಮಯ ಪರಿಸರದಲ್ಲಿ, ಸಾಂಸಾರಿಕ ಬಂಧನದ ನಡುವೆಯೂ, ಇಟ್ಟ ಹೆಜ್ಜೆಗಳ ಗಟ್ಟಿತನವನ್ನು ಬಲಪಡಿಸಿ ಸಿಕ್ಕ ಅವಕಾಶವನ್ನೇ ಕಂಡೂ ಕಾಣದ, ತಿಳಿದು ತಿಳಿಯದ, ಸಾಮಾಜಿಕ ಬಿಗಿ ಚೌಕಟ್ಟುಗಳೊಳಗೇ ಮುಳುಗಿದ್ದವರ ಏಳ್ಗೆಗಾಗಿ ಶ್ರಮಿಸಿದ ದಿಟ್ಟ ಮಹಿಳೆ ಎನ್ನಬಹುದು. ಹೆಜ್ಜೆಗಳ ಸಂಧಿಯಲ್ಲಿ ಸಿಕ್ಕ ಗಂಟುಗಳನ್ನು ತುಳಿದು ಹಾಕದೇ, ಬಿಡಿಸಿಕೊಂಡು ನಡೆದ ಧೀಮಂತೆಯ ಅನುಭವಗಳ ಕಿರು ಪರಿಚಯ ಇಲ್ಲಿದೆ.
ಕವಿತೆ, ಕತೆ, ಕಾದಂಬರಿ ಕ್ಷೇತ್ರದಲ್ಲಿ ಬರವಣಿಗೆಯ ಮೂಲಕ ತಮ್ಮದೇ ಛಾಪು ಮೂಡಿಸಿದ ಬರಹಗಾರ್ತಿ ವಾಣಿ ರಾವ್ ಅವರು 1931 ಅಕ್ಟೋಬರ್ 4ರಂದು ಜನಿಸಿದರು. ತಾಯಿ ಇಂದಿರಾಬಾಯಿ. ತಂದೆ ಭೀಮಾಚಾರ್. ಹೋಮಿಯೋಪತಿಯಲ್ಲಿ ಪಿಎಚ್ಡಿ ಪದವೀಧರರು. ಕಾಲೇಜು ದಿನಗಳಿಂದಲೇ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ರಚಿಸಿದ ಕವಿತೆ, ಮಕ್ಕಳ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಣಿ ಅವರು ರಚಿಸಿದ ಪ್ರಮುಖ ಕೃತಿಗಳೆಂದರೆ ಸುಪ್ತಚೇತನ, ದರ್ಪಣ, ಆಕಾಶದೀಪ, ಹೇಮಶೃಂಗ (ಕಾದಂಬರಿ); ವನಸುಮ, ನೀಲಕೊಳ, ಗಣೇಶ ಎಲ್ಲಿ, ಮಾಯಾವಿ (ಮಕ್ಕಳ ಕತೆ), ಸಿಂಧು-ಬಿಂದು (ಭಾಷಾಂತರ); ಚಿನ್ನಯ ರಾಮಾಯಣ, ಮಗು, ಸ್ವಾಮಿ ಪ್ರಣವಾನಂದಜೀ (ವೈದ್ಯಕೀಯ); ಹೋಮಿಯೋಪತಿ, ಮೆಟೀರಿಯಾ ಮೆಡಿಕಾ ಸೂತ್ರಗಳು (ಕವನ ಸಂಕಲನ); ...
READ MORE