ಕುಂವಿಯವರ ಆತ್ಮಕಥನಾತ್ಮಕ ಬರವಣಿಗೆ. ಕುಂವೀ ಬರಹಗಳೇ ಹಾಗೆ. ಓದುತ್ತಾ ಓದುತ್ತಾ ಭಯ ಹುಟ್ಟಿಸಿದಂತೆ ಕಾಣಿಸಿದರೂ ಕಥೆ ಮುಗಿಯುಷ್ಟರಲ್ಲಿ ನಮ್ಮನ್ನು ಸೆಳೆದುಕೊಂಡು ಬಿಟ್ಟಿರುತ್ತವೆ. ಕರ್ನಾಟಕಾಂಧ್ರ ಗಡಿ ಭಾಗವಾದ ಬಳ್ಳಾರಿ ಜಿಲ್ಲೆಯ ಹಳ್ಳಿಗಳ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕುಂವೀ ಚಿತ್ರಿಸುತ್ತಾರೆ. ಅಲ್ಲಿಯ ನಕ್ಸಲೀಯರು, ಸದಾ ಹತ್ತನ್ನೆರಡು ಗನ್ಮ್ಯಾನ್ಗಳ ಮಧ್ಯದಲ್ಲಿ ಬದುಕುವ ಜಮೀನ್ದಾರರು, ಅಮಾಯಕ ಸಾಮಾನ್ಯ ಜನತೆ-ಇವರು ಹೀಗೆಲ್ಲಾ ಬದುಕಲು ಸಾಧ್ಯವೇ ಎಂದು ಅಚ್ಚರಿಪಡುವಷ್ಟು ಅಪರಿಚಿತ ಬದುಕನ್ನು ನಮ್ಮ ಮುಂದಿಡುತ್ತಾರೆ. ಅಲ್ಲಿಯ ಎರೆಮಣ್ಣು ಮಳೆಗಿಂತ ರಕ್ತದಲ್ಲಿಯೇ ಹೆಚ್ಚು ನೆನೆದಂತೆ ಚಿತ್ರಿಸುವ ಇವರ ಬರವಣಿಗೆ ಕಂಡು, ಖ್ಯಾತ ಲೇಖಕ ಪಿ. ಲಂಕೇಶರು ಹೀಗೆಲ್ಲಾ ಇರಲು ಸಾಧ್ಯವೇ ಎಂದು ಅಚ್ಚರಿ ವ್ಯಕ್ತ ಪಡಿಸಿದ್ದುಂಟು. ಮೂರು ದಶಕಗಳಿಗೂ ಮೀರಿದ ವೃತ್ತಿ ಬದುಕಿನಲ್ಲಿ ಕಾರ್ಯ ನಿರ್ವಹಿಸಿದ ಕುಗ್ರಾಮಗಳ ಜನರ ಬದುಕಿನ ಬಗ್ಗೆ ಕಥೆ ಕಟ್ಟುತ್ತಾರೆ.
ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...
READ MORE