'ದಶಾವತಾರ'-ಮಾಗೋಡು ರಾಮ ಹೆಗಡೆ ಅವರ ಆತ್ಮಕಥನ- ಈ ಕೃತಿಯನ್ನು ಲೇಖಕ ರಾಜು ಹೆಗಡೆ ಸಂಪಾದಿಸಿದ್ದಾರೆ. ಬಯಲಾಟ, ರಾಜಕೀಯ, ಹೊಟೇಲ್ ಉದ್ಯಮ ಎಲ್ಲವುಗಳಲ್ಲೂ ಸೇರಿಕೊಂಡ ರಾಮ ಹೆಗಡೆ ಅವರ ಬದುಕು ಅಗಾಧ ಅನುಭವಗಳ ಕಣಜ. ಅವರ ಬದುಕಿನ ಪ್ರತಿ ತಿರುವು ಅತ್ಯಂತ ವಿಭಿನ್ನ. ಅವರ ಬದುಕಿನ ಕಥನಗಳನ್ನು ಲೇಖಕರು ಅತ್ಯಂತ ಅರ್ಥಪೂರ್ಣವಾಗಿ ಸಂಪಾದಿಸಿದ್ದಾರೆ.
ರಾಜು ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. 1964 ರ ಜುಲೈ 17ರಂದು ಜನಿಸಿದರು. ಶಿರಸಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ರಾಜು ಹೆಗಡೆ, ಮನುಷ್ಯ ಸಂಬಂಧಗಳ ಬದಲಾಗುವ ಭಾವಗಳನ್ನು ಕುರಿತು ಕಥೆ ಕವನ ಬರೆಯುವುದರಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ. ಪ್ರಕಟಿತ ಕೃತಿಗಳು- ಪಾಯಸದ ಗಿಡ, ಅಂಗಳದಲ್ಲಿ ಆಕಾಶ, ಟೊಂಗೆಯಲ್ಲಿ ಸಿಕ್ಕ ನಕ್ಷತ್ರ (ಕವನ ಸಂಕಲನಗಳು), ಅಪ್ಪಚ್ಚಿ (ಕಥಾ ಸಂಕಲನ), ಹಳವಂಡ (ಲಘು ಬರಹಗಳ ಸಂಕಲನ), ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ (ವಿಮರ್ಶೆ), ಜಿ.ಎಸ್. ಅವಧಾನಿ ಕವಿತೆಗಳು (ಸಂಪಾದನೆ). ...
READ MORE