‘ಪಲ್ಲವಿ ಅನುಪಲ್ಲವಿ’ ಆರ್. ಎನ್. ಜಯಗೋಪಾಲ್ ಆತ್ಮಕತೆ. ಈ ಕೃತಿಯನ್ನು ಪತ್ರಕರ್ತ, ಲೇಖಕ ಎನ್.ಎಸ್. ಶ್ರೀಧರಮೂರ್ತಿ ಅವರು ನಿರೂಪಿಸಿದ್ದಾರೆ. ಆರ್. ಎನ್. ಜಯಗೋಪಾಲ್ ಅವರ ಆತ್ಮಕತೆಯಲ್ಲಿ ಬರೆದುಕೊಳ್ಳುತ್ತ ಹೋದ ಕಾಲ ನನ್ನ ಜೀವನದ ಸಾರ್ಥಕಘಟ್ಟವೆಂದು ಭಾವಿಸುತ್ತೇನೆ ಎನ್ನುತ್ತಾರೆ. ಜಯಗೋಪಾಲ್ ಮಾಡಿಸಿದ ವ್ಯಕ್ತಿ-ಪ್ರಸಂಗಗಳ ಕುರಿತ ಅಂಕಿ-ಅಂಶಗಳನ್ನು ಅವರಿಗೆ ಸಿದ್ಧಪಡಿಸಿಕೊಡುತ್ತಿದ್ದೆ. ಆ ಕುರಿತು ನೆನಪುಗಳನ್ನು ಅವರು ಒಂದೋ ಹೇಳುತ್ತಿದ್ದರು ಇಲ್ಲವೇ ಬರೆದುಕೊಡುತ್ತಿದ್ದರು. ನಾನದನ್ನು ಉದ್ದೇಶಿತ ಸ್ವರೂಪದಲ್ಲಿ ರೂಪಿಸಿ ಮಲ್ಲಿಗೆಯಲ್ಲಿ ಪ್ರಕಟಿಸುತ್ತಿದ್ದೆ ಎಂದು ಕೃತಿಯ ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಜಯಗೋಪಾಲ್ ಅವರ ಜ್ಞಾಪಕಶಕ್ತಿ ಅತ್ಯಂತ ಸ್ಫುಟವಾದದ್ದು, ಕೊಂಚ ಎಳೆ ಸಿಕ್ಕರೂ ಸಾಕು. ಆ ಪ್ರಸಂಗವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದರು. ಎಷ್ಟೋ ಸಲ ಅದನ್ನು ಹಿಡಿಯಲು ಭಾಷೆ ಅತ್ಯಂತ ದುರ್ಬಲ ಮಾಧ್ಯಮ ಎನಿಸುತ್ತಿತ್ತು ಎಂದು ತಮ್ಮ ಅನುಭವಗಳ ಕುರಿತು ಬರೆದಿದ್ದಾರೆ. ಈ ಕೃತಿಯಲ್ಲಿ ಗಮನಿಸಬಹುದಾದರೆ ಜಯಗೋಪಾಲ್ ದಾಖಲಿಸಿರುವುದೆಲ್ಲ ಬೇರೆಯವರ ಕುರಿತ ನೆನಪುಗಳೆ ಎನ್ನುತ್ತಾರೆ ಲೇಖಕ ಶ್ರೀಧರಮೂರ್ತಿ.
ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು 'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...
READ MORE