ಲೇಖಕಿ ನೇಮಿಚಂದ್ರ ಅವರು ಬರೆದ ಆತ್ಮಕಥನ ಕೃತಿ ʻಬೆಳಕು ತಂದ ಜೀವ ಡಾ. ಈಡಾ ಸೋಫಿಯಾ ಸಡ್ಕರ್ʼ. ನಮ್ಮ ನೆಲದಲ್ಲೇ ಹುಟ್ಟಿ ಬೆಳೆದ ಭಾರತದ ಕ್ಷಾಮ, ಬಡತನ, ರೋಗಗಳಿಗೆ ಸಾಕ್ಷಿಯಾಗಿದ್ದರು. ಜೊತೆಗೆ ಅಂದಿನ ದಿನಗಳಲ್ಲಿ ಹೆರಿಗೆಯ ಸಮಯದಲ್ಲಿ ಮಹಿಳೆಯರು ಅನುಭವಿಸುತ್ತಿದ್ದ ವೈದ್ಯಕೀಯ ಸಮಸ್ಯೆಗಳಿಗೆ ಸಿಲುಕಿ ಪ್ರಾಣಬಿಡುವುದೂ ಸಮಾನ್ಯ ಸಂಗತಿಯಾಗಿತ್ತು. ಈ ಎಲ್ಲಾ ನೋವಿನ ಸ್ಥಿತಿಗೆ ಕರಗಿ ಆಮೆರಿಕಾದ ಸರ್ವ ಸಂಪತ್ತನ್ನು ಸುಖದ ಜೀವನವನ್ನು ತೊರೆದು ಮಹಿಳೆಯರಿಗಾಗಿಯೇ ವೈದ್ಯಳಾದ ಧೀರ ಮಹಿಳೆ ಡಾ. ಈಡಾ ಸೋಫಿಯಾ ಸಡ್ಕರ್. ಭಾರತದ ಮಹಿಳೆಯರಿಗೆ ವೈದ್ಯರಾಗುವ ತರಬೇತಿ ಮತ್ತು ಆತ್ಮವಿಶ್ವಾಸವನ್ನು ಇವರು ನೀಡಿದ್ದರು. 1990ರಲ್ಲಿ ಒಂದು ಬೆಡ್ಡಿನ ಕ್ಲಿನಿಕನ್ನು ಆರಂಭಿಸಿದ ಈಡಾಳ ಕನಸಿನ ಆಸ್ಪತ್ರೆ ಇಂದು ʻವೆಲ್ಲೂರ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿ'ನ ಹೆಸರಿನಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು, ಜನರ ನೋವಿಗೆ ನೆರಳಾಗಿದೆ.
ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...
READ MORE