‘ಗಬಾಳ’ ಕನ್ನಡಕ್ಕೆ ಅನುವಾದವಾಗುತ್ತಿರುವ ಮರಾಠಿಯ ಮೂರನೆಯ ದಲಿತ ಆತ್ಮಕಥನ. ಈ ಮೊದಲು ಲಿಂಗಾಯತ ತಂದೆ-ಹರಿದನ ತಾಯಿಯಿಂದ ಜನ್ಮ ಪಡೆದ ಶರಣಕುಮಾರ ಲಿಂಬಾಳೆ ಅವರ ಅಕ್ರಮ ಸಂತಾನ(ಅಕ್ಕರ-ಮಾಶಿ), ಗಂಟೆಚೋರ ಲಕ್ಷ್ಮಣ ಗಾಯಕವಾಡ ಅವರ ಉಚಲ್ಯಾ(ಅನು-ಚಂದ್ರಕಾಂತ ಪೋಕಳೆ) ಕನ್ನಡದಲ್ಲಿ ಪ್ರಕಟವಾಗಿದ್ದು. ಈಗ ಬುಡುಬುಡುಕೆಯ ಜನಾಂಗದ ದಾದಾಸಾಹೇಬ ಮಲ್ಹಾರಿ ಮೋರೆ ಅವರ ಗಬಾಳ ಪ್ರಕಟವಾಗಿದೆ.
ಗಬಾಳ ಪದವನ್ನು ಉತ್ತರ ಗಡಿಯ ಕನ್ನಡಿಗರೂ ಬಳಸುತ್ತಾರೆ. ಮೂಲ ಹೆಸರನ್ನೇ ಈ ಅನುವಾದ ಕೃತಿಗೂ ಇಡಲಾಗಿದೆ. ಇಲ್ಲಿಯ ಭಾಷೆ, ಮಾತು-ಕತೆಗಳು ಅಲ್ಲಿಯ ಕನ್ನಡಿಗರ ಆಡುಮಾತುಗಳೇ ಆಗಿವೆ.ಇಲ್ಲಿಯ ಜತ್ತ, ಮಂಗಳವೇಢೆ ಇವು ಕರ್ನಾಟಕದ ಸೀಮೆಗೆ ಹೊಂದಿದ ಮಹಾರಾಷ್ಟ್ರದ ತಾಲೂಕುಗಳು ಇಲ್ಲಿಯ ಕನ್ನಡಿಗರು, ಬಳಸುವ ಮಾತುಗಳನ್ನೇ ಈ ಪುಸ್ತಕದಲ್ಲಿ ಬಳಸಲಾಗಿದೆ.
ಕಾದಂಬರಿಕಾರ ದು.ನಿಂ. ಬೆಳಗಲಿಯವರು (ಪೂರ್ಣ ಹೆಸರು: ದುರದುಂಡೇಶ್ವರ ನಿಂಗಪ್ಪ ಬೆಳಗಲಿ, ಜನನ: 30-03-1931) ಹುಟ್ಟಿದ್ದು ಬನಹಟ್ಟಿಯಲ್ಲಿ. ತಂದೆ ನಿಂಗಪ್ಪ. ತಾಯಿ ಚೆನ್ನಮ್ಮ, ಅಥಣಿ ತಾಲ್ಲೂಕಿನ ಐನಾಪುರ ಇವರ ಮೂಲ. ಬನಹಟ್ಟಿಯಲ್ಲಿ ನೆಲೆಸಿದ್ದರು. ಒಣಬಾಳೇ ದಿಂಡು ಸುಟ್ಟು ಕರೇ ಬಣ್ಣ ತಯಾರಿಸುತ್ತಿದ್ದು, ಬಾಳೇ ಬೂದಿ ಮನೆತನವೆಂದದ್ದು ಬೆಳಗಲಿ ಎಂಬ ಅಡ್ಡ ಹೆಸರಾಯಿತು. ತಾಯಿ ಜಾನಪದ ಕಥೆಗಳ ಹಾಡುಗಾರ್ತಿ. ಎಸ್.ಎಸ್.ಎಲ್.ಸಿ. ಪಾಸ್ ಮಾಡಿದ ಶಾಲೆಯಲ್ಲಿ (1951-55) ಶಿಕ್ಷಕರಾದರು. ಬೆನ್ನ ಹಿಂದಿನ ಕಣ್ಣು ಪ್ರಥಮ ಕಥಾಸಂಕಲನ(1957) ಪ್ರಕಟ, ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಗೆ ಹಾಗೂ ಪ್ರಪಂಚ, ಜೀವನ ಪತ್ರಿಕೆಗಳಿಗೆ ಬರೆದರು. 1960 ರಲ್ಲಿ ಮೊದಲ ಕಾದಂಬರಿ ಮುಳ್ಳು ...
READ MORE