ಮನುಷ್ಯರ ಹಲವು ಕಾಯಿಲೆಗಳಿಗೆ ಮಾನಸಿಕ ಒತ್ತಡ, ಸ್ಥಿಮಿತ ಕಳೆದುಕೊಳ್ಳುವುದು ಕಾರಣ ಎಂದು ಮನೋವೈದ್ಯರು ವಿಶ್ಲೇಷಿಸುತ್ತಾರೆ. ಇಂತಹ ಮನೋವೈದ್ಯರ ಬಳಿ ಪ್ರತಿದಿನ ಸಾಂತ್ವನ ಬಯಸಿ ನೂರಾರು ಜನ ಭೇಟಿಯಾಗುತ್ತಾರೆ. ಹೀಗೆ ಅವರೊಂದಿನ ಮಾತು-ಆಪ್ತ ಸಮಾಲೋಚನಾ ವಿಧಾನ ಹಾಗೂ ತಮ್ಮ ಅನುಭವಕ್ಕೆ ಬಂದ ಮುಖ್ಯ ಸಂಗತಿಗಳನ್ನು ಈ ಕೃತಿಯಲ್ಲಿ ಲೇಖಕ ಹಾಗೂ ಮನೋವೈದ್ಯರೂ ಆದ ಡಾ. ಸಿ.ಆರ್. ಚಂದ್ರಶೇಖರ ಅವರು ತಮ್ಮ ಆತ್ಮಕಥನ ರೂಪದ ಕೃತಿ ‘ಮನೋವೈದ್ಯನ ಆತ್ಮಕಥನ’ ದಲ್ಲಿ ದಾಖಲಿಸಿದ್ದಾರೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE