‘ನೆನಪಿನ ಬಿಂಬಗಳು’ ಎಂ. ವಿ. ಭಟ್ ಅವರ ಆತ್ಮಕಥನವಾಗಿದೆ. ಮಿತ್ತೂರು ದಂಪತಿಗಳು ಜೀವನದೂದ್ದಕೂ ಬದುಕನು ಗಂಭಿರವಾಗಿ ಜೀವನ ನಡೆಸುವ ಜೀವನಗಾಥೆಯ ಬಗ್ಗೆ ಈ ಆತ್ಮಕಥನದಲ್ಲಿ ತಿಳಿಸಲಾಗಿದೆ.
ಲೇಖಕ ಎಂ. ವಿ. ಭಟ್ ತಮ್ಮ ಇಳಿವಯಸ್ಸಿನಲ್ಲೂ ಚಿಂತನೆಗೆ ತೆರೆದುಕೊಂಡವರು. ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ಯುಗಪುರುಷ ಪ್ರಕಟಣಾಲಯದ ಮೂಲಕವೇ ಹತ್ತು ಹಲವಾರು ಕೃತಿಗಳನ್ನು ಪ್ರಕಟಪಡಿಸಿದ್ದಾರೆ. ಅವರಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಲಭಿಸಿದೆ. ...
READ MOREಹೊಸತು-2002-ಮಾರ್ಚ್
ಜನಜೀವನ ಸಾಹಿತ್ಯ ಸದನ, ಮೇದರಹಳ್ಳಿ, ಬೆಂಗಳೂರು-90 ಇದೊಂದು ಆತ್ಮಕಥೆ ಅಥವಾ ಆತ್ಮಾವಲೋಕನ. ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶ್ರೀ ಮಿತ್ತೂರು ದಂಪತಿಗಳು ಜೀವನದುದ್ದಕ್ಕೂ ಬದುಕನ್ನು ಬಹು ಗಂಭೀರವಾಗಿ, ಸೂಕ್ಷ್ಮವಾಗಿ ಅವಲೋಕಿಸುತ್ತ ಹೆಜ್ಜೆ ಹೆಜ್ಜೆಗೂ ಸಮಾಜದಿಂದ ಪಾಠ ಕಲಿತವರು. ಈ ಕಥನದ ಮೂಲಕ ತಮ್ಮ ಸುದೀರ್ಘ ಬಾಳಿನಲ್ಲಿ ಬೀಸಿದ ತಂಗಾಳಿ, ಚುಚ್ಚಿದ ಮುಳ್ಳುಗಳು, ಉಂಡ ಸಿಹಿ-ಕಹಿಗಳನ್ನು ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ. ಅವರು ತನ್ನ ಬಗ್ಗೆ ಹೇಳಿಕೊಳ್ಳುತ್ತಲೇ ಸುತ್ತಲ ಸಮಾಜದ ಒಳಿತನ್ನೂ, ಹುಳುಕನ್ನೂ ನಮಗೆ ತಿಳಿಸುತ್ತಾರೆ.