ಸಾಹಿತಿ ಕೆ. ಶಿವರಾಮ ಕಾರಂತ ಹೇಳುವಂತೆ ’ಸುಮಾರು ಐದು ದಶಕಗಳ ಕಾಲಕ್ಕಿಂತ ಹೆಚ್ಚಾಗಿ ಲೇಖನ ವೃತ್ತಿ ನಡೆಸಿದ ತಮ್ಮ ಬರೆಹಗಳ ಉದ್ದೇಶವನ್ನು, ಹಿನ್ನೆಲೆಯನ್ನು ಬದಲಿಸುತ್ತಾ, ಸಾಗಿದ ದೃಷ್ಟಿಯನ್ನು ಸಾಹಿತ್ಯ ಮತ್ತು ನಾನು ಕೃತಿಯು ವಿವರಿಸುತ್ತದೆ ಎಂದಿದ್ದಾರೆ.
”ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯು ಕಾರಂತರ ಆತ್ಮಕಥೆ ಎಂದೇ ಪರಿಗಣಿತವಾಗಿದೆ. ಆದರೆ, ’ಸ್ಮೃತಿ ಪಟಲದಿಂದ’ ಎಂಬ ಸರಣಿ ಮಾಲೆಯಡಿ ಪ್ರಕಟವಾಗುವ ಎಲ್ಲ ಕೃತಿಗಳು ಒಂದು ಅರ್ಥದಲ್ಲಿ ಅವರ ಆತ್ಮಕಥೆಗಳೇ ಆಗಿವೆ. ಆದ್ದರಿಂದ, ಸಾಹಿತ್ಯ ಮತ್ತು ನಾನು ಕೃತಿಯು ಸಹ ಅವರ ಆತ್ಮಕಥೆಯೇ ಆಗಿದೆ. ಸಾಹಿತ್ಯ ಕುರಿತಂತೆ ತಮ್ಮ ದೃಷ್ಟಿಕೋನ, ಅನುಭವ, ಹಿನ್ನೆಲೆ ಎಲ್ಲವನ್ನೂ ಅವರು ಈ ಕೃತಿಯಲ್ಲಿ ಕಟ್ಟಿಕೊಡುತ್ತಾರೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE