'ಎಳೆದ ತೇರು' ಡಾ. ವ್ಯಾಸರಾವ್ ನಿಂಜೂರ್ ಅವರ ಆತ್ಮಕಥನವಾಗಿದೆ. ಲೇಖಕನೇ ಕೆಲ ಮಾತುಗಳನ್ನು ಹೇಳುವುದೆಂದರೆ ಅದು ನನ್ನ ಮಟ್ಟಿಗೆ ಸ್ವಲ್ಪ ಮುಜುಗರದ ವಿಷಯವೇ. ಆತ್ಮಕಥೆಯಲ್ಲಿ ತನ್ನನ್ನು ಲೇಖಕ ವೈಭವೀಕರಿಸುವುದು, ತನಗಿಷ್ಟವಾಗದವರ ಕುರಿತು ಅಸಡ್ಡೆ ತೋರಿಸುವುದು ಅಥವಾ ಆರೋಪ ಹೊರಿಸುವುದು - ಇಂತಹುದು ಆಗಾಗ ಕಂಡುಬರುವುದು ಸಾಮಾನ್ಯ. ಇಂತಹ ತಪ್ಪುಗಳನ್ನು ನಾನು ಮಾಡಿಲ್ಲ ಎಂದು ನಂಬಿದ್ದೇನೆ. ಸ್ವಲ್ಪ ತಮಾಷೆಯ ಮಾತುಗಳನ್ನು ಸೇರಿಸಿರಬಹುದು, ಅಷ್ಟೆ. ಬರಹ ವಸ್ತುನಿಷ್ಠವಾಗಿರುವಂತೆ ಪ್ರಯತ್ನಪಟ್ಟಿದ್ದೇನೆ. ಹೀಗಾಗಿ ಕೆಲವರ ಬಗ್ಗೆ ಸಣ್ಣ ಪುಟ್ಟ ಕಟುನುಡಿಗಳು ಬಂದಿರಬಹುದು. ಇವು ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಬಳಸಲ್ಪಟ್ಟಿವೆಯೇ ಹೊರತು ವೈರವನ್ನು ಸಾಧಿಸಲು ಉಪಯೋಗಿಸ ಲ್ಪಟ್ಟಿಲ್ಲ ಎಂದು ಸ್ಪಷ್ಟೀಕರಿಸಲು ಬಯಸುತ್ತೇನೆ. ಎಂದು ಲೇಖಕರು ಹೇಳಿದ್ದಾರೆ.
ಸಾಹಿತಿ, ವಿಜ್ಞಾನಿ ವ್ಯಾಸರಾವ್ ನಿಂಜೂರ್ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ ತೆಂಕ ನಿಡಿಯೂರಿನಲ್ಲಿ. ತಂದೆ ಶ್ರೀನಿವಾಸ ನಿಂಜೂರ್, ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಗರಡಿ ಮಜಲು, ಕೊಡವೂರು, ಮಿಲಾಗ್ರಿಸ್ ಹೈಸ್ಕೂಲು ಮುಂತಾದೆಡೆ ಪಡೆದ ಅವರು, ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಬಿ.ಎಸ್ಸಿ. ಪದವಿಯನ್ನೂ ಪಡೆದರು. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ, ಹಾಗೂ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಗಳನ್ನು ಪಡೆದರು. ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಆರಂಭಿಸಿದ ಅವರು, ನಂತರ ಮುಂಬಯಿಯ ಭಾಭಾ ಪರಮಾಣು ಸಂಶೋಧನ ಕೇಂದ್ರದ ಬಯೋ ಕೆಮಿಸ್ಟ್ರಿ ...
READ MORE