ಚಿಂತಕಿ ವೀಣಾ ಬನ್ನಂಜೆ ಅವರ ಕೃತಿ-ಅಂತರ್ಮುಖ. ಆಧ್ಯಾತ್ಮದೆಡೆಗಿನ ಸೆಳೆತದೊಂದಿಗೆ ಬರೆದ ಆತ್ಮಕಥನದಂತಿದೆ ಈ ಕೃತಿ. ಅಧ್ಯಾತ್ಮಿಕ ಬದುಕಿಗೆ ಮಾರ್ಗದರ್ಶನ ತೋರಿದ ಗುರು ಸತ್ಯಕಾಮ ಅವರೊಂದಿಗಿನ ಒಡನಾಟವೂ ಈ ಕೃತಿಯ ಜೀವಾಳ. ಗುರುವಿನ ಸತ್ಸಂಗದಲ್ಲಿದ್ದ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದೇ ಈ ಕೃತಿ.
ವೀಣಾ ಬನ್ನಂಜೆ ಅವರು ಮೂಲತಃ ಉಡುಪಿ ಜಿಲ್ಲೆಯವರು. ಇವರ ತಂದೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು. ಎಚ್ಚರದ ಕನಸು (ಕಥಾ ಸಂಕಲನ), ಅಕ್ಕಮಹಾದೇವಿಯ ದೈ (ವೈಚಾರಿಕ) ಸಂತೆಯಲ್ಲೊಂದು ಮನೆ ೨೦೧೧ (ಅಂಕಣ ಬರಹ ಕೃತಿಗಳನ್ನು ವೀಣಾ ಬನ್ನಂಜೆ ಪ್ರಕಟಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಕಾವ್ಯಾನಂದ ಪುರಸ್ಕಾರಗಳು ಇವರಿಗೆ ಸಂದಿದೆ. ...
READ MORE