ಯದು ಪರಂಪರೆ : ಅರಸರ ಆಳ್ವಿಕೆಯ ಯಶೋಗಾಥೆ ಕೃತಿಯು ಕೌಂಡಿಣ್ಯ ಅವರು ಮೈಸೂರಿನ ಅಳ್ವಿಕೆಯ ಬಗ್ಗೆ ಬರೆದಿರುವ ಈ ಮಹೋನ್ನತ ಐತಿಹಾಸಿಕ ಕೃತಿಯಾಗಿದೆ. ಮಹಾರಾಜರುಗಳು ದಕ್ಷತೆಯಿಂದ ಆಡಳಿತ ನಡೆಸಿದ್ದಾರೆ. ಮತ್ತು ತಮ್ಮ ಕಲ್ಯಾಣದ ಕಾರ್ಯಗಳಿಂದ ಪ್ರಜೆಗಳ ಅಭಿಮಾನ, ಗೌರವಕ್ಕೆ ಪಾತ್ರರಾಗಿದ್ದಾರೆ. ಕರ್ನಾಟಕದ ಮುಕುಟ ಮಣಿಯಂತಿರುವ ಮೈಸೂರು ಪ್ರಾಂತ್ಯವನ್ನು ಯದು ವಂಶದ ಒಡೆಯ ಪರಂಪರೆಯಲ್ಲಿ ಪ್ರಕಾಶಿಸಿರುವ ಅರಸರುಗಳು ಆಳಿದ್ದಾರೆ. ಮತ್ತು ಈ ನಾಡಿಗೆ ವಿಶಿಷ್ಟವಾದ ಮತ್ತು ನಾಡಿಗೆ ಶಾಶ್ವತವಾಗಿ ಉಪಯೋಗವಾಗುವಂತಹ ಕೊಡುಗೆ ನೀಡಿದ್ದಾರೆ.
ಕೌಂಡಿನ್ಯ ಕಾವ್ಯನಾಮದಿಂದ ಪ್ರಸಿಧ್ದಿಯನ್ನು ಪಡೆದಿರುವ ವೈ.ಎನ್ ನಾಗೇಶ್ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು, ಚಲನಚಿತ್ರಗಳು ರಚಿಸಿದ್ದಾರೆ. ಪ್ರಶಸ್ತಿ ...
READ MORE