ಲೇಖಕ ವಿಠ್ಠಲ ಭಂಡಾರಿ ಅವರ ಇತಿಹಾಸ ಸಂಬಂಧಿ ಕೃತಿ ಸ್ವಾತಂತ್ರ್ಯಾನೂ ಬೇಕು ಭೂಮಿನೂ ಬೇಕುʼ. ಪುಸ್ತಕವು ಉತ್ತರ ಕನ್ನಡ ಭಾಗದಲ್ಲಿ ನಡೆದ ರೈತ ಚಳುವಳಿಯ ಕುರಿತು ಇಂದಿಗೂ ಯಾರಿಗೂ ತಿಳಿದಿರದ ಹಲವಾರು ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಲ್ಲಿ ಲೇಖಕರು ವಿಷಯಗಳನ್ನು ಎರಡು ಭಾಗಗಳಲ್ಲಿ ಹಂಚಿಕೊಂಡಿದ್ದಾರೆ. ಒಂದನೇ ಭಾಗವು 1920- 40ರ ಮೂರು ದಶಕಗಳ ಕೆಂಬಾವುಟ ನಾಯಕತ್ವದ ರೈತ ಹೋರಾಟಗಳ ವೀರಗಾಥೆಯ ಕುರಿತು ಹೇಳುತ್ತದೆ. ಇದನ್ನು ಹೋರಾಟಗಳ ನಾಯಕರ, ಸಂದರ್ಶನಗಳ ಪಾಲುಗೊಂಡವರ, ಕುಟುಂಬದವರ ಮತ್ತು ದಾಖಲೆಗಳ ಸಂಗ್ರಹಗಳ ಆಧಾರದ ಮೇಲೆ ಮೊದಲ ಬಾರಿಗೆ ದಾಖಲು ಮಾಡಲಾಗಿದೆ. ಎರಡನೇ ಭಾಗವು 1970ರ ದಶಕದ ವರೆಗಿನ ಉತ್ತರ ಕನ್ನಡದ ರೈತ ಚಳುವಳಿಯ ಗೊತ್ತಿರದ ಇತಿಹಾಸದ ಘಟನೆಗಳ ಬಗ್ಗೆ ಎರಡನೇ ಭಾಗ ಬಿಚ್ಚಿಡುತ್ತದೆ. ಹೀಗೆ, ಬೇರೆ ಬೇರೆ ದಾಖಲೆಗಳ, ಸಂಗ್ರಹಗಳ ಆಧಾರದ ಮೇಲೆ ಸಂಗ್ರಹಿಸಿದ ಮಾಹಿತಿಗಳು ಮೊದಲ ಬಾರಿಗೆ ಸ್ವಾತಂತ್ರ್ಯಾನೂ ಬೇಕು ಭೂಮಿನೂ ಬೇಕುʼ ಪುಸ್ತಕದ ಮೂಲಕ ದಾಖಲು ಮಾಡಲಾಗಿರುವುದು ವಿಶೇಷವಾಗಿದೆ.
.ಲೇಖಕ ವಿಠ್ಠಲ ಭಂಡಾರಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಗ್ರಾಮದವರು. ಸದ್ಯ, ಎಂಜಿಎಸ್ ಮತ್ತು ಜಿಎಚ್ ಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ. ದೇಶದ ಪ್ರಜಾಪ್ರಭುತ್ವ ಮೌಲ್ಚಗಳನ್ನು ಪ್ರತಿಪಾದಿಸುವ ‘ಸಂವಿಧಾನದ ಓದು’ ಚಳವಳಿಯ ಮೂಲಕ ರಾಜ್ಯದಾದ್ಯಂತ ಚಿರಪರಿಚಿತರು. ಸಾಹಿತಿ ಆರ್.ವಿ.ಭಂಡಾರಿ ಅವರ ಪುತ್ರರು. ಕೃತಿಗಳು: ಒಡಲ ಬೆಂಕಿ (ಕವನ ಸಂಕಲನ) ಹಾಗೂ ಪ್ರೀತಿಯ ಕಾಳು (ಮಕ್ಕಳ ಕವನ ಸಂಕಲನ) ರಚಿಸಿದ್ದರು. ಕೋವಿಡ್ ನಿಂದ ಅಸ್ವಸ್ಥರಾಗಿದ್ದ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 2021ರ ಮೇ 7 ರಂದು ನಿಧನರಾದರು. ...
READ MORE