ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ , ಎಲ್ಲಾ ಧಾರ್ಮಿಕ ಚೌಕಟ್ಟನ್ನೂ ಮೀರಿ ಇರಬಹುದಾದ ದೇವಸ್ಥಾನದ ಸಂಪ್ರದಾಯ, ಆರಾಧನಾ ವಿಧಾನಗಳು, ಸ್ಥಳ ಪುರಾಣ, ಉತ್ಸವ ಆಚರಣೆಗಳ ಕುರಿತು ಲೇಖಕರು ಈ ಕೃತಿಯಲ್ಲಿ ಸ್ಪಷ್ಟವಾಗಿ ವಿವರಗಳನ್ನು ಒದಗಿಸಿದ್ದಾರೆ. ಭಾರತೀಯ ಸರ್ವೇಕ್ಷಣಾ ಇಲಾಖೆಯ ನೀತಿಗೆ ಆತುಕೊಂಡಂತೆ ಯಾವುದೇ ಉತ್ಪ್ರೇಕ್ಷೆ, ಮೌಢ್ಯಗಳಿಗೆ ಬಲಿಯಾಗದೆ ಒಂದು ದೇಸಿ ಇತಿಹಾಸವನ್ನು ವಸ್ತುನಿಷ್ಠವಾಗಿ, ಅಧ್ಯಯನಶೀಲವಾಗಿ ನಿರೂಪಿಸುವ ಕೆಲಸದ ಪ್ರಯತ್ನವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ. ಇದರ ಮೂಲ ಗಾಂಭೀರ್ಯತೆಗೆ ಎಲ್ಲೂ ಧಕ್ಕೆ ಬರದಂತೆ, ಯಾವುದೇ ಅರ್ಥ ವ್ಯತ್ಯಾಸವಾಗದಂತೆ “ಮಹೇಶ ತಿಪ್ಪಶೆಟ್ಟಿ”ಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.
.ರಾವ್ ಸಾಹೇಬ ಮಲ್ಲಪ್ಪ ಶಂಕ್ರಪ್ಪ ಸಿಂಹಾಸನ ಎಂಬ ಧೀಮಂತ ವ್ಯಕ್ತಿಯ ಬಗ್ಗೆ ಲೇಖಕ ಜಿ.ಡಿ. ಸಕ್ರಿ ಅವರು ಕೃತಿ ರಚಿಸಿದ್ದು, ಮಹೇಶ ತಿಪ್ಪಶೆಟ್ಟಿ ಸಂಪಾದಿಸಿದ್ದಾರೆ. ಬಾಗೇವಾಡಿಯ ತಹಸೀಲ್ದಾರರಾಗಿ ನಿವೃತ್ತಿಯಾದ ಮೇಲೆ ಸಿಂಹಾಸನ ಅವರು ಬಸವೇಶ್ವರ ದೇವಸ್ಥಾನಕ್ಕೆ ಮಂಡಳಿ ರೂಪಿಸಿ ಜೀಣೋದ್ಧಾರ ಕೈಗೊಂಡಿದ್ದರು. ಮೈಸೂರು ಚಾಮುಂಡೇಶ್ವರಿ ದೇವಸ್ಥಾನ ಕುರಿತು ಅವರು ಕೃತಿ ರಚಿಸಿದ್ದಾರೆ. ...
READ MORE