ಹಿರಿಯ ಚಿಂತಕ, ಮಂಕುತಿಮ್ಮನ ಕಗ್ಗ ಖ್ಯಾತಿಯ ಬರಹಗಾರ ಡಿ.ವಿ. ಗುಂಡಪ್ಪ (ಡಿ.ವಿ.ಜಿ) ಅವರ ನಾಟಕ ಕೃತಿ-ಶ್ರೀ ವಿಜಯನಗರ ಸ್ಥಾಪನೆಯಲ್ಲಿ ಘಟಿಸಿದ ಐತಿಹಾಸಿಕ ಮಹತ್ವದ ವಿಚಾರ-ಸಂಗತಿಗಳನ್ನು ಖ್ಯಾತ ಸಾಹಿತಿ ಡಿ.ವಿ.ಜಿ ಅವರು ದಾಖಲಿಸಿದ ನಾಟಕವಿದು. ಮಾಧವ (ವಿದ್ಯಾರಣ್ಯ) ಚಿಂತೆ, ಸಾಯಣನ ಚಿಂತೆ, ಮಾಧವನ ತೀರ್ಥಯಾತ್ರೆ, ಮಾಧವ ಭಟ್ಟರ ಹೊಸ ಆಶ್ರಮ ನಾಮಗಳು, ವಿದ್ಯಾರಣ್ಯ-ಹರಿಹರರ ಸಂಭಾಷಣೆ, ಹರಿಹರನ ಪುತ್ರ ವಿಯೋಗ, ಬುಕ್ಕರಾಜನ ಮಹಮ್ಮದೀಯ ಮೈತ್ರಿ, ಬುಕ್ಕರಾಜನ ಬೇಸರ ಹೀಗೆ ವಿವಿಧ ಅಂಕಗಳ ಮೂಲಕ ಇಡೀ ವಿಜಯನಗರ ಸ್ಥಾಪನೆಯ ಸಮಗ್ರ ಚಿತ್ರಣ ನೀಡಿರುವ ನಾಟಕವಿದು. ಈ ಕೃತಿಯು ಹಲವಾರು ಆವೃತ್ತಿಗಳಲ್ಲಿ ಮುದ್ರಿತಗೊಂಡಿದೆ. ಬೆಂಗಳೂರಿನ ಕರ್ಣಾಟಕ ಪ್ರಕಟನಾಲಯವು 1928ರಲ್ಲಿ ಮೊದಲ ಬಾರಿಗೆ ಈ ಕೃತಿಯನ್ನು ಪ್ರಕಟಿಸಿತ್ತು.
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE