‘ವಿಜಯನಗರ ಕಾಲದ ಸೈನ್ಯವ್ಯವಸ್ಥೆ ಮತ್ತು ಯುದ್ಧನೀತಿ’ ಡಾ.ಎಸ್.ವೈ.ಸೋಮಶೇಖರ್ ಅವರ ಕೃತಿ.ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಸೇವುಣ, ಹೊಯ್ಸಳ ಈ ಇತಿಹಾಸ ಕ್ರಮದಲ್ಲಿ ವಿಜಯನಗರವೇ ಕರ್ನಾಟಕದ ಕೊನೆಯ ಸಾಮ್ರಾಜ್ಯವಾಗಿದೆ. ದೀಪ ಆರುವ ಮೊದಲು ದೊಡ್ಡದಾಗುವಂತೆ ಕೊನೆಯ ಸಾಮ್ರಾಜ್ಯವಾಗಿರುವ ವಿಜಯನಗರ ದೊಡ್ಡದಾಗಿ ಬೆಳೆದು, ದೊಡ್ಡರೀತಿಯಲ್ಲಿ ನಾಶವಾಗಿ, ಕನ್ನಡಿಗರಲ್ಲಿ ಮರೆಯದ, ಕಾಡುವ ದೊಡ್ಡ ನೆನಪಾಗಿ ಉಳಿದಿದೆ.
ಈ ನೆನಪನ್ನು ಮರು ನಿರ್ಮಾಣ ಮಾಡುವಲ್ಲಿ ನೆರವಾಗುವುದು ಅಂದಿನ ಆಕರ ಸಾಮಗ್ರಿ. ವಿಜಯನಗರ ಸೈನ್ಯ ಮತ್ತು ಯುದ್ಧಗಳನ್ನು ಕೇಂದ್ರವಾಗಿಟ್ಟು ಕೊಂಡಿರುವ ಇದು ಕೇವಲ ಇವುಗಳ ಸ್ವರೂಪವನ್ನು ವಿವರಿಸಿ ವಿರಮಿಸದೆ, ಇವುಗಳ ಹಿಂದಿನ ಕಾರಣ ಮುಂದಿನ ಪರಿಣಾಮಗಳನ್ನೂ ಗಮನಿಸಿರುವುದರಿಂದ ಕಾರಣ-ಕಾರ್ಯ- ಪರಿಣಾಮಗಳೆಂಬ ಏಕಸೂತ್ರತೆ ಈ ಗ್ರಂಥದಲ್ಲಿ ಅಚ್ಚುಕಟ್ಟಾಗಿ ಅನಾವರಣಗೊಂಡಿದೆ. ಪುಸ್ತಕ -ಲೇಖನ ರೂಪದ ಕೇಂದ್ರೀಯ ಆಕರದೊಂದಿಗೆ ಕೋಟೆ-ವೀರಗಲ್ಲುಗಳಂಥ ಕ್ಷೇತ್ರೀಯ ಆಕರವನ್ನು ಸಂಗ್ರಹಿಸಿರುವುದು ಈ ಕೃತಿಯ ಮತ್ತೊಂದು ವಿಶೇಷತೆ.
ಇತಿಹಾಸ, ಪುರಾತತ್ವ ಶಾಸ್ತ್ರ, ಕಲೆ ಮತ್ತು ವಾಸ್ತು ಶಿಲ್ಪ ಮುಂತಾದ ವಿಷಯಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ ಡಾ.ಎಸ್ ವೈ ಸೋಮಶೇಖರ್ ಅವರು 1970ರ ಜೂನ್ 28ರಂದು ಜನಿಸಿದರು.ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ,ಮೈಸೂರು ವಿಶ್ವವಿದ್ಯಾಲಯದಲ್ಲಿ (1991-93) ಎಂ,ಎ ಪದವಿಯನ್ನ, ಹಂಪೆಯ ಬಜಾರುಗಳು ಎಂಬ ವಿಷಯದ ಮೇಲೆ ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಎಂ.ಫಿಲ್ ಪದವಿಯನ್ನು (1993-94), ವಿಜಯನಗರ ಸಾಮ್ರಾಜ್ಯದ ಸೈನ್ಯ ವ್ಯವಸ್ಥೆ ಮತ್ತು ಯುದ್ಧ ನೀತಿ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು (2000), ಭಾರತದ ಸಾಹಿತ್ಯ ಎಂಬ ವಿಷಯದಲ್ಲಿ , ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಡಿಪ್ಲೋಮ ಪಡೆದ ಅವರು ...
READ MORE