ಇತಿಹಾಸದ ಪುಟದಲ್ಲಿ ಅಷ್ಟೇನು ಸ್ಥಾನ ಪ್ರಸಿದ್ದಿ ಪಡೆಯದ “ ಬೆಳವಡಿ ಮಲ್ಲಮ್ಮನ” ಬಗ್ಗೆ ಈ ಕೃತಿಯೂ ಮೂಡಿಬಂದಿದೆ. ಶಿವಾಜಿ ಮಲ್ಲಮ್ಮರು, ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕನ ಸಾಲಿಗೆ ಸೇರುತ್ತಾರೆ. ಮಹಿಳಾ ಸೈನ್ಯದ ದಳಪತಿಯಾಗಿ ಕಾದಾಡಿ ಶಿವಾಜಿಯಂತಹ ಬಲಿಷ್ಠ ಸೇನೆಯನ್ನು ಮಣಿಸಿದ ಕೀರ್ತಿಯೂ ಶಿವಾಜಿ ಮಲ್ಲಮ್ಮನಿಗೆ ಸಲ್ಲುತ್ತದೆ. ಹಿರಿಯ ವಿಧ್ವಾಂಸರಾದ ಎಂ. ಚಿದಾನಂದ ಮೂರ್ತಿಯವರು ಈ ಕೃತಿಯನ್ನು ರಚಿಸಿದ್ದಾರೆ. ಶಿವಾಜಿ ಮಲ್ಲಮ್ಮ ಅವರ ಐತಿಹಾಸಿಕ ದಾಖಲೆಯ ಒಂದು ಸರಳ ಸಾಂಸ್ಕೃತಿಕ ವಿಶ್ಲೇಷಣೆಯಂತೆ ಕಂಡುಬರುವ ಈ ಕೃತಿಯೂ ಇತಿಹಾಸದ ಪುಟಗಳಿಂದ ನಾಡಿನ ಹೆಮ್ಮೆಯಾದ ಶಿವಾಜಿ ಮಲ್ಲಮ್ಮರ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್ಯಾಂಕ್ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ...
READ MORE