‘ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು’ ಕೃತಿಯು ಚನ್ನಬಸವಯ್ಯ ಹೀರೆಮಠ ಅವರ ಚರಿತ್ರೆಯ ಗ್ರಂಥವಾಗಿದೆ. ಪ್ರಾಚೀನ ಕರ್ನಾಟಕದ ಚರಿತ್ರೆಯೆಂದರೆ ದಕ್ಷಿಣ ಭಾರತದ ಚರಿತ್ರೆಯೇ ಆಗಿದೆ. ಶಾಸನಗಳು ಕರ್ನಾಟಕವನ್ನು ' ಕುಂತಲನಾಡು ' ಎಂದು ಕರೆದಿವೆ. ಈ ನಾಡಿನ ವ್ಯಾಪ್ತಿಯು ಉತ್ತರದಲ್ಲಿ ನರ್ಮದಾ ನದಿಯಿಂದ ದಕ್ಷಿಣದಲ್ಲಿ ಕಾವೇರಿಯವರೆಗೆ ವಿಸ್ತರಿಸಿತ್ತು. ಇದರಲ್ಲಿ ಸಪ್ತಾರ್ಧಲಕ್ಷ ಹಳ್ಳಿಗಳಿದ್ದವೆಂದು ಶಾಸನಗಳು ಒಕ್ಕೊರಲಿನಿಂದ ಸಾರಿವೆ. ಈ ಹಳ್ಳಿಗಳ ವಿವರ ಮತ್ತು ಅವು ಸಮಾವೇಶಗೊಂಡಿದ್ದ ಪ್ರಧಾನ ವಿಭಾಗಗಳನ್ನು ಆಧಾರಸಹಿತವಾಗಿ ಇಲ್ಲಿ ದಾಖಲಿಸಲಾಗಿದೆ. ಚರಿತ್ರೆಯನ್ನು ಅರಿಯಲು ಶಾಸನಗಳು ಮುಖ್ಯ ಆಕರ. ಅವುಗಳ ಸಹಾಯದಿಂದ ಅಂದಿನ ಸಂಸ್ಕೃತಿಯ ಸ್ಪಷ್ಟ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಸಾಮಾಜಿಕ, ಶೈಕ್ಷಣಿಕ ಮಾಹಿತಿಗಳಂತೆ ಆಡಳಿತದ ಹಲವು ವಿವರಗಳೂ ಈ ಕೃತಿಯಲ್ಲಿವೆ..
ಲೇಖಕ ಡಾ. ಚನ್ನಬಸವಯ್ಯ ಹಿರೇಮಠ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದವರು. ತಂದೆ- ವೀರಭದ್ರಯ್ಯ ಹಿರೇಮಠ, ತಾಯಿ- ಗೌರಮ್ಮ. ಚನ್ನಬಸವಯ್ಯ ಎಂ.ಎ. ಹಾಗೂ ಪಿಎಚ್ ಡಿ ಪದವೀಧರರು. ಸ್ನಾತಕೋತ್ತರ ಡಿಪ್ಲೋಮಾ ಇನ್ ಬಸವೇಶ್ವರ ಸ್ಟಡೀಜ್ (ಪ್ರಥಮಸ್ಥಾನ ಚಿನ್ನದ ಪದಕದೊಂದಿಗೆ) ಸದ್ಯ, ರಾಯಚೂರಿನಲ್ಲಿ ವಾಸವಿದ್ದು, ಅಲ್ಲಿಯ ಬಿ.ಆರ್.ಬಿ. ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : (ಸಂಶೋಧನೆ) ಕುರುಗೋಡು ಸಿಂದರು ಒಂದು ಅಧ್ಯಯನ, ನಮ್ಮ ಜಿಲ್ಲೆ ಐತಿಹಾಸಿಕ ಪರಿಚಯ, ಎಡೆದೊರೆನಾಡು , ರಾಯಚೂರು ಜಿಲ್ಲೆಯ ಶರಣರು, ಮಸ್ಕಿಯ ಶಾಸನಗಳು, ಸತ್ಯದಹಾದಿ ಸಂಪುಟ-1 , ಅಟ್ಟಳೆನಾಡಿನ ಸಿಂದರು , ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು, ಅನಾವರಣ(ಸಂಶೋಧನ ಲೇಖನಗಳು), ಕಲ್ಯಾಣ ಕರ್ನಾಟಕದ ಸಂಸ್ಕೃತಿ, (ಸಂಪಾದಿತ ಕೃತಿಗಳು) ರಾಯಚೂರು-ಕೊಪ್ಪಳ ಜಿಲ್ಲೆಯ ಶಾಸನಗಳು , ಮಾನ್ವಿ ...
READ MORE