‘ಕರ್ನಾಟಕ ಪಾಳೆಗಾರರ ನ್ಯಾಯಾಡಳಿತ’ ಕೃತಿಯು ಲಕ್ಷಣ್ ತೆಲಗಾವಿ ಅವರ ಗ್ರಂಥ. ಇಲ್ಲಿ ತಿಳಿಸಿರುವ ಇತಿಹಾಸದ ವಿಚಾರಗಳು ಪಾಳೇಗಾರರ ಬದುಕಿನ ಚಿತ್ರಣವನ್ನು ನೀಡುತ್ತದೆ. ಕರ್ನಾಟಕ ಪಾಳೆಯಗಾರರ ನ್ಯಾಯಾಡಳಿತ ಕುರಿತ ವಿಶಿಷ್ಟ ಗ್ರಂಥ ಇದಾಗಿದೆ. ಪಾಳೆಯಗಾರರ ಹಾಗೂ ಸ್ಥಳೀಯ ಅರಸರ ಬೆಳಕಿಗೆ ಬರದೇ ಇದ್ದ ' ನ್ಯಾಯದಾನ ಪದ್ಧತಿ ' ಯನ್ನು ಮೊಟ್ಟ ಮೊದಲಿಗೆ ದಾಖಲಿಸುವ ಪ್ರಯತ್ನ ಈ ಕೃತಿಯ ಮೂಲಕ ಮಾಡಲಾಗಿದೆ. ಚಿತ್ರದುರ್ಗ ಪಾಳೇಗಾರರ ಆಡಳಿತ ಬೇಡರ ಕಟ್ಟೆಮನೆಗಳು, ಅಯ್ಯಣ ಪೇಟೆಯಲ್ಲಿರುವ ಪೇಟೆ ಆಂಜನೇಯ ದೇವಸ್ಥಾನದಲ್ಲಿ ಭರಮಣ್ಣ ನಾಯಕನ ಕಾಲದಲ್ಲಿ ನಡೆದ ವ್ಯಾಜ್ಯ ತೀರ್ಮಾನಗಳು ಇನ್ನೂ ಹೆಚ್ಚಿನ ವಿಚಾರಗಳನ್ನು ಇಲ್ಲಿವೆ. ಚಿತ್ರದುರ್ಗ, ಕೆಳದಿ, ಹಾಗಲವಾಡಿ, ಹಂಡೆ, ಹರಪನಹಳ್ಳಿ, ನಾಯಕನಹಟ್ಟಿ, ತರೀಕೆರೆ, ಮತ್ತೊಡು, ಗುಡಗುಂಟಿ, ಕನಕಗಿರಿ, ಸುಗಟೂರು, ಹಾಲೇರಿ, ಸುರಪುರ, ಆನೇಗೊಂದಿ, ದೇವದುರ್ಗ, ಯಲಹಂಕ ಪ್ರಭುಗಳು, ದೇಸಗತಿ ಮನೆತನಗಳು -- ಹೀಗೆ ಅನೇಕ ಪಾಳೆಯಗಾರರ/ಅರಸು ಮನೆತನಗಳ ನ್ಯಾಯಾಂಗ/ನ್ಯಾಯತೀರ್ಮಾನ ಪದ್ಧತಿ ಕುರಿತು ಅನೇಕ ವಿದ್ವಾಂಸರು ಬರೆದಿರುವ ವಿಶಿಷ್ಟ ಸಂಶೋಧನ ಲೇಖನಗಳನ್ನು ಇಲ್ಲಿ ಕಾಣಬಹುದು.
ಇತಿಹಾಸಜ್ಞ, ಸಂಶೋಧಕ ಲಕ್ಷ್ಮಣ್ ತೆಲಗಾವಿಯವರು 1947 ಜನವರಿ 01 ಹುಟ್ಟಿದ್ದು ಚಿತ್ರದುರ್ಗದಲ್ಲಿ. ಹಲವಾರು ಐತಿಹಾಸಿಕ, ಸಾಮಾಜಿಕ ಚಳುವಳಿಗಳ ಗ್ರಂಥಗಳ ರಚಿಸಿ ಮತ್ತು ಪ್ರಕಟಿಸಿದ್ಧಾರೆ. ಚಿತ್ರದುರ್ಗ ದರ್ಶಿನಿ, ಇದು ಚಿತ್ರದುರ್ಗ, ಚಿತ್ರದುರ್ಗ ಹ್ಯಾನ್ ಇನ್ಸೈಟ್, ಬುರುಗು (ಚಿಂತನ ಲೇಖನಗಳು), ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ದಲಿತ ಚಳುವಳಿಗಳು, ಮೌರ್ಯ ಮತ್ತು ಶಾತವಾಹನಯುಗ, ಚಿತ್ರದುರ್ಗಜಿಲ್ಲಾ ಇತಿಹಾಸ, ಚಿತ್ರದುರ್ಗ ನಾಯಕ ಅರಸರು, ವಿಜಯನಗರಕಾಲದ ರಾಮಾನುಜಕೂಟಗಳು, ಎಪ್ಪತ್ತೇಳು ಪಾಳಯಗಾರರು, ಚಿತ್ರದುರ್ಗದ ಒನಕೆ ಓಬವ್ವ, ಚಾರಿತ್ರಿಕ ವಿವೇಚನೆ, ದೊಡ್ಡೇರಿಕದನ ಮುಂತಾದ ಕೃತಿಗಳನ್ನು ಸ್ವಾತಿ ಪ್ರಕಾಶನ, ವಾಲ್ಮೀಕಿ ಸಾಹಿತ್ಯ ಸಂಪದ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ...
READ MORE