ಲ.ನ.ಸ್ವಾಮಿ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕೃತಿ ʻಪುರಾವೃತ್ತಾಂತʼ. ಪ್ರಸ್ತುತ ಕೃತಿ ಪ್ರಾಚೀನ ಸಂಸ್ಕೃತಿಯ ವೃತ್ತಾಂತಗಳ ಕುರಿತು ಹೇಳುತ್ತದೆ. ಪ್ರಾಚೀನ ಸಂಸ್ಕೃತಿ ಕುರಿತಂತೆ ಅನೇಕ ಸಂಶೋಧನ ಲೇಖನಗಳು ಈ ಕೃತಿಯಲ್ಲಿದೆ. ಶಾಸನಗಳಲ್ಲಿ ಪ್ರಾರ್ಥನೆ-ಅರ್ಥ-ಪ್ರಾಮುಖ್ಯತೆ, ಸಾಗರ ತಾಲೂಕು ಹಂದಿಗೋಡು ಗ್ರಾಮದ ಬಾನಿಯ ಶಾಸನದ ಪರಿಷ್ಕೃತ ಪಾಠ ಹಾಗೂ ಸಂಗಳ ಕೆರೆಯ ಶಿಲ್ಪಗಳು, ಶ್ರೀಪುರುಷನ ಮದಿಯನೂರಿನ ಶಾಸನ, ಇಮ್ಮಡಿ ಕೃಷ್ಣರಾಜ ಒಡೆಯರ ಕಾಮಕ್ಕಾನ್ ಪಾಳೆಯಂನ ಶಾಸನ, ಪ್ರಾಗಿತಿಹಾಸ ಕಾಲದ ಕರ್ನಾಟಕದ ಸಮಾಜ ಮತ್ತು ಜನಜೀವನ, ಕರ್ನಾಟಕದಲ್ಲಿ ವರ್ಣಚಿತ್ರಕಲೆ ಬೆಳವಣಿಗೆ ಒಂದು ಕಲಾ ಇತಿಹಾಸದ ಅವಲೋಕನ, ವರದಾ ನದಿಯಲ್ಲಿ ದೊರೆತಿರುವ ಸವಣೂರು ನವಾಬರ ಕಾಲದ ಜಲಸೌಧ, ಶ್ರೀರಂಗಪಟ್ಟಣದ ರಂಗನಾಥ ದೇವಾಲಯದಲ್ಲಿ ಆಚರಿಸುವ ಉತ್ಸವಗಳು, ಬೆಂಜಮಿನ್ ಲೂಯಿಸ್ ರೈಸ್ ಅವರ ಮೈಸೂರು ಅಂಡ್ ಕೂರ್ಗ್ ಫ್ರಮ್ ಇನ್ಸ್ಕ್ರಿಪ್ಷನ್ಸ್ ಕೃತಿಯ ಅವಲೋಕನ ಹೀಗೆ ಇತಿಹಾಸ ಮತ್ತು ಸಂಸ್ಕೃತಿ ಕುರಿತ ಅನೇಕ ಸಂಶೋಧನಾತ್ಮಕ ಲೇಖನಗಳು ಪ್ರಸ್ತುತ ಗ್ರಂಥದಲ್ಲಿವೆ.
ಲ.ನ. ಸ್ವಾಮಿ ಅವರು 1962ರಂದು ಮಂಡ್ಯದಲ್ಲಿ ಜಿಲ್ಲೆಯಲ್ಲಿ ಜನಿಸಿದರು. ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿ ಎಎಸ್ಐ, ಸೆಂಟರ್ ಫಾರ್ ಹಿಸ್ಟರಿ ಆಂಡ್ ಫಿಲಾಸಫಿ ಆಫ್ ಸಯನ್ಸ್, ತಮಿಳ್ ಯೂನಿವರ್ಸಿಟಿ, ಮುಂತಾದ ಸಂಸ್ಥೆಗಳಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಮೈಸೂರಿನ ಥೆರೆಶಿಯನ್ ಕಾಲೇಜು, ಜೆಎಸ್ಎಸ್ ಕಾಲೇಜು ಮತ್ತು ನಟರಾಜ ಕಾಲೇಜುಗಳಲ್ಲಿ ಇತಿಹಾಸ ಪ್ರಧ್ಯಾಪಕರಾಗಿಯೂ ಕೆಲಸ ಮಾಡಿದ ಅನುಭವ ಇವರದು. ಬರವಣಿಗೆ ಇವರ ಹವ್ಯಾಸ. ಕನ್ನಡ- ಆಂಗ್ಲ ಭಾಷೆಯಲ್ಲಿ 25ಕ್ಕೂ ಹೆಚ್ಚು ಸಂಶೋಧನ ಗ್ರಂಥಗಳನ್ನು ಪ್ರಕಟಿಸಿದ್ದಾರೆ, ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಸಂಶೋಧನಾ ಪ್ರಬಂಧಗಳನ್ನು ರಚಿಸಿ ವಿವಿಧ ವೇದಿಕೆಗಳಲ್ಲಿ ಮಂಡಿಸಿದ್ದಾರೆ. ಪ್ರಕಟಿತ ಕೃತಿಗಳು: ವೆಂಕಾಮಾತ್ಯ, ...
READ MORE