ಕರ್ನಾಟಕ ಚರಿತ್ರೆಯನ್ನು ಕಟ್ಟಿಕೊಡುವ ಕೃತಿ ’ಕರ್ನಾಟಕ ಚರಿತ್ರ”. ಒಟ್ಟು ಏಳು ಸಂಪುಟಗಳಿರುವ ಈ ಕೃತಿಯ ನಾಲ್ಕನೇ ಸಂಪುಟ ಇದಾಗಿದೆ. ಕರ್ನಾಟಕದ ಸಾಂಸ್ಕೃತಿಕ, ರಾಜಕೀಯ, ವೈಚಾರಿಕ, ನೆಲೆಯಲ್ಲಿ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಮೌಖಿಕ ಕಥನಗಳು, ಕಲೆಗಳನ್ನು ಬೆಸೆದುಕೊಂಡೇ ರೂಪಿತವಾಗಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಿಕೊಳ್ಳಲು ಈ ಸಂಪುಟಗಳು.ಸಹಕಾರಿ. ಕೃತಿಯ ಮೊದಲ ಆವೃತ್ತಿಯು (1997 ) ಸೇರಿದಂತೆ ಈವರೆಗಿನ ಒಟ್ಟು 7 ಸಂಪುಟಗಳ ಮೌಲ್ಯ 4 ಸಾವಿರ ರೂ. ಗಳು.
ಹಿರಿಯ ಇತಿಹಾಸ ತಜ್ಞ, ಶಿಕ್ಷಣ ತಜ್ಞರಾದ ಪ್ರೊ. ಬಿ. ಷೇಕ್ ಅಲಿ ಹಾಸನ ಜಿಲ್ಲೆಯ ಬೆಳಗೋಡು ಗ್ರಾಮದವರು. ಮೈಸೂರು ವಿ.ವಿ.ಯಿಂದ ಆನರ್ಸ್ ಪದವಿ ಹಾಗೂ ಆಲಿಘರ್ ಮುಸ್ಲಿಂ ವಿ.ವಿ,ಯಿಂದ ಪಿಎಚ್ಡಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಉರ್ದು, ಇಂಗ್ಲಿಷ್, ಫ್ರೆಂಚ್ ಭಾಷೆ ಬಲ್ಲವರು. ಪ್ರೊ. ಷೇಕ್ ಅಲಿ ಅವರು ಸಾಲಾರ್ ಉರ್ದು ದಿನಪತ್ರಿಕೆ ಹಾಗೂ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ, ನೂರ್-ಎ-ಬಸೀರತ್ ಉರ್ದು ಮಾಸಿಕದ ಸಂಪಾದಕರಾಗಿದ್ದಾರೆ. ಕನ್ನಡ ವಿ.ವಿ.ಪ್ರಕಟಿಸಿರುವ ”ಕರ್ನಾಟಕ ಇತಿಹಾಸದ ಏಳು ಸಂಪುಟಗಳು’ ಪ್ರಧಾನ ಸಂಪಾದಕರು. ಇವರಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ...
READ MORE