ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹಾಗೂ ಬಿ.ಎಸ್. ರಾಮಭಟ್ಟ ಅವರು ಜಂಟಿಯಾಗಿ ಸಂಪಾದಿಸಿದ ಕೃತಿ-ಕೆಳದಿ ಸಂಸ್ಥಾನ: ಸಮಗ್ರ ಅಧ್ಯಯನ. ಶಿವಮೊಗ್ಗದ ಸಾಗರದಿಂದ 8 ಕಿ.ಮೀ. ದೂರದ ಕೆಳದಿ ಸಂಸ್ಥಾನವು ಇತಿಹಾಸ ಪ್ರಸಿದ್ಧ ರಾಜವಂಶ. ಕೆಳದಿ ನಾಯಕರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. 1565 ರಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡಿತು. ನಂತರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆಳದಿ ನಾಯಕರು ಕರಾವಳಿ ಜಿಲ್ಲೆಗಳು ಶಿವಮೊಗ್ಗವೂ ಸೇರಿದಂತೆ ಕರಾವಳಿ ಇತರೆ ಪ್ರದೇಶಗಳನ್ನು ಆಳಿದರು. ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶದ ಈಗಿನ ಕರ್ನಾಟಕ, ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಮತ್ತು ಭಾಗಗಳು ಹಲವು ಪ್ರದೇಶಗಳಲ್ಲಿ, ಉತ್ತರ ಕೇರಳ, ಮಲಬಾರಿನ ಭಾಗಗಳು ಬಯಲುಪ್ರದೇಶಗಳಲ್ಲಿ ಆಳ್ವಿಕೆನಡೆಸಿದರು. ಕ್ರಿ.ಶ. 1763 ರಲ್ಲಿ, ಹೈದರ್ ಅಲಿಯನ್ನು ಸೋಲಿಸಿದ ನಂತರ, ಅವರು ಮೈಸೂರು ಸಾಮ್ರಾಜ್ಯಕ್ಕೆ ಸೇರ್ಪಡೆಯಾದರು.ಕೆಳದಿ ಆಡಳಿತಗಾರರು ಲಿಂಗಾಯತರಾಗಿದ್ದರು ಆದರೆ ಅವರು ಇತರ ಧರ್ಮಗಳ ಅನುಯಾಯಿಗಳು, ಸಹಿಷ್ಣುವಾಗಿದ್ದರು. ಕೊಡಗು ಮೇಲೆ ಆಳಿದ ಕೊಡಗುನ ಹಲೇರಿ ರಾಜರು, ಕೆಳದಿ ನಾಯಕ ರಾಜವಂಶದ ಒಂದು ಉಪಶಾಖೆಯಾಗಿತ್ತು. ಇಂತಹ ಐತಿಹಾಸಿಕ ಸಂಗತಿಗಳನ್ನು ಕಟ್ಟಿಕೊಡುವ ಅಧ್ಯಯನಪೂರ್ಣ ಕೃತಿ.
ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...
READ MORE