ಡಾ. ಕೆ. ಶಿವರಾಮ ಕಾರಂತ ಅವರ ಕೃತಿ-ಚಾಲುಕ್ಯ ವಾಸ್ತು ಶಿಲ್ಪ. ವಿಜ್ಞಾನ, ಇತಿಹಾಸ, ಸಾಹಿತ್ಯ, ಕಲೆ, ಚಿತ್ರಕಲೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಲೇಖಕರು, ಚಾಲುಕ್ಯರ ವಾಸ್ತು ಶಿಲ್ಪದ ವೈಭವ ಕುರಿತಂತೆ ಇತಿಹಾಸದ ಮಾಹಿತಿಗಳನ್ನು ಸಂಗ್ರಹಿಸಿ ನೀಡಿರುವ ಕೃತಿ ಇದು. ಚಾಲುಕ್ಯ ವಾಸ್ತುಶಿಲ್ಪದ ಸಮಗ್ರ ಚಿತ್ರಣ ನೀಡುತ್ತದೆ. ವಾಸ್ತುಶಿಲ್ಪ ಸಾಧನೆ, ಶಿಲ್ಪಗಳ ವಿವಿಧ ಮಾದರಿಗಳು, ಶೈಲಿ, ಗಾತ್ರ, ಮರಳುಗಲ್ಲು, ನಾಗರ ಹಾಗೂ ದ್ರಾವಿಡ ಶೈಲಿಯ ರಚನೆಗಳು, ಕೊರೆದ ಗುಹೆಗಳು, ಸ್ತೂಪಗಳು, ಕಾಂಚಿದೇವಾಲಯ ಇತ್ಯಾದಿ ಮಾಹಿತಿ ಒಳಗೊಂಡಿದೆ. ಅಗತ್ಯವಿದ್ದೆಡೆ ಬಳಸಿರುವ 73 ಚಿತ್ರಗಳು ಓದುಗರ ಗಮನ ಸೆಳೆಯುತ್ತವೆ.
ಬೆಂಗಳೂರಿನ (ಮೈಸೂರು ರಾಜ್ಯ) ಲಲಿತಕಲಾ ಅಕಾಡೆಮಿಯು 1969ರಲ್ಲಿ (ಪುಟ: 79) ಈ ಕೃತಿಯನ್ನು ಮೊದಲ ಬಾರಿಗೆ ಹಾಗೂ ತದನಂತರ, ಇದೇ ಪ್ರಕಾಶನವು 1991ರಲ್ಲಿ (ಪುಟ: 103) ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE