ಈ ಕೃತಿಯು ಅಣೆಕಟ್ಟು ನಿರ್ಮಾಣದ ಹಾಗೂ ಘಟನಾವಳಿಗಳ ಸಂಗ್ರಹ ಚಿತ್ರಣವನ್ನು ಸಂಪೂರ್ಣವಾಗಿ ತಿಳಿಸಲಾಗಿದೆ. ಈ ಅಣೆಕಟ್ಟಿನಲ್ಲಿ ಆತ್ಮಕಥೆಯಲ್ಲಿ ನಂಜರಾಜ್ ಅರಸ್ ಅವರು ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಅರಸ್ ಅವರು ಮುಖ್ಯ ಪಾತ್ರ ವಹಿಸಿದ ಬಗೆಯನ್ನು, ಅಣಿಕಟ್ಟಿನ ಬಗೆಗೆ ತಿಳಿಯದ ಕೆಲವು ಸಂಗತಿಗಳನ್ನು ಈ ಕೃತಿಯಲ್ಲಿ ತಿಳಿಸಿದ್ದಾರೆ.
ಕೃಷ್ಣರಾಜ ಸಾಗರ (ಕೆಆರ್ಎಸ್ ) ಅಣೆಕಟ್ಟು ನಿರ್ಮಾಣದಲ್ಲಿ ಸರ್. ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅತ್ಯಲ್ಪ ಅಥವಾ ಏನೇನು ಇಲ್ಲ ಎಂಬ ವಿವಾದಾಸ್ಪದ ಸಂಗತಿಯನ್ನು ಮೈಸೂರಿನ ಇತಿಹಾಸತಜ್ಞ ಪಿ.ವಿ.ನಂಜರಾಜ ಅರಸ್ ತಮ್ಮ ’ನಾನು ಕನ್ನಂಬಾಡಿ ಕಟ್ಟೆ’ ಪುಸ್ತಕದಲ್ಲಿ ಕನ್ನಂಬಾಡಿ ಕಟ್ಟೆ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಮೈಸೂರು ನಿವಾಸಿಯಾಗಿರುವ ಡಾ. ಪಿ.ವಿ. ನಂಜರಾಜ ಅರಸು ಅವರು ಸದಾ ಹೊಸತನಕ್ಕೆ ತುಡಿಯುವವರು. ಬರವಣಿಗೆ, ಚಲನಚಿತ್ರ ನಿರ್ಮಾಣ, ನಿರ್ದೇಶನ, ಇತಿಹಾಸ ಅಧ್ಯಯನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದರೆ, ಅವರು ನಿರ್ಮಿಸಿ ಮತ್ತು ನಿರ್ದೇಶಿಸಿದ 'ಸಂಕಲ್ಪ' (1974) ಚಲನಚಿತ್ರವು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿದಂತೆ ಏಳು ರಾಜ್ಯ ಪ್ರಶಸ್ತಿಗಳನ್ನು ಗಳಿಸಿತ್ತು. ಪೋಸ್ಟ್ ಮಾಸ್ಟರ್, ಚೌಕದ ದೀಪ, ತೂಗುದೀಪ, ಮಂಜು ಮುಸುಕಿದ ಹಾದಿ ಚಿತ್ರಗಳ ಜೊತೆಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಸಂಪಿಗೆ ಅರಳಿತು, ಟೀ ನಂತರದ ಕಪು, ಸಾಸರ್, ಮೋಡದ ನೆರಳು (ಕಥಾ ಸಂಕಲನಗಳು), ಹೊಸಿಲ ಬಳಿ, ಕಳೆದುಹೋದವರು (ಕಾದಂಬರಿಗಳು), ತ್ರಿಶಂಕುವಿನ ಮಕ್ಕಳು (ಕಿರುಕಾದಂಬರಿ), ನೀಲಿ ತೊರೆ, ಒಂದು ...
READ MOREಸಂಕೀರ್ಣ-2017