ಕನ್ನಡದ ಪ್ರಮುಖ ಕತೆಗಾರ, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಅಮರೇಶ ನುಗಡೋಣಿಯವರು ಹೊರತಂದಿರುವ ಪುಸ್ತಕ ’ಹೈದರಾಬಾದು ಕರ್ನಾಟಕ - ಹಾಡು ಪಾಡು’.
ಹೈದರಾಬಾದು-ಕರ್ನಾಟಕದ ಭೌಗೋಳಿಕ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು, ಭೌಗೋಳಿಕ ಪರಿಸರದ ಸಾಂಸ್ಕೃತಿಕ ಚರಿತ್ರೆಯನ್ನು ಅವಲೋಕಿಸಿರುವ ಬಗ್ಗೆ ಈ ಪುಸ್ತಕದಲ್ಲಿದೆ. ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಮೌರ್ಯರ ಕಾಲದಿಂದ ಹಿಡಿದು ಆಧುನಿಕ ಪ್ರಭುತ್ವದವರೆಗಿನ ಕಾಲಾವಧಿಯಲ್ಲಿ ಪ್ರಭುತ್ವ, ಧರ್ಮ, ಭಾಷೆ, ಸಾಹಿತ್ಯ ಮತ್ತು ಸಮಾಜಗಳ ನಡುವಿನ ಸಂಬಂಧವನ್ನು ಅರಿಯಲು ಪುಸ್ತಕ ಉತ್ತಮ ಆಕರ.
ಹೈದರಾಬಾದು ಕರ್ನಾಟಕದ ಅಧ್ಯಯನ ನಡೆಸಿ ಹೊರತಂದಿರುವ ಕೃತಿ ಚರಿತ್ರೆಯೂ ಹೌದು, ಸಂಸ್ಕೃತಿ ಕಥನವೂ ಹೌದು. ಸ್ವಾತಂತ್ಯ್ರೋತ್ತರ ಕಾಲದ ಸಾಹಿತ್ಯ, ಶಿಕ್ಷಣ ಮತ್ತು ಸಮಾಜ , ವಲಸೆ ಬಂದ ಮಕ್ಕಳ ಶೈಕ್ಷಣಿಕ ಸಮಸ್ಯೆಗಳು , ರೈತರ ಸಮಸ್ಯೆ, ಜಲಸಂಪತ್ತು, ಬಡತನ, ಮತ್ತು ನಿಜಾಮ ಆಳ್ವಿಕೆ , ಅನುಭಾವಿಗಳ - ತತ್ವಪದಕಾರರ ಚಳವಳಿ, ಲಿಪಿಯ ಬಳಕೆ, ಯೋಜನೆ- ನೀತಿಗಳು, ಮತ್ತು ದೇಶಿ ಭಾಷಿಗರ ಬಿಕ್ಕಟ್ಟು, ಸಂಸ್ಥಾನಗಳು -ಬಹುಸಂಖ್ಯಾತ ಕನ್ನಡಿಗರ ಬಗ್ಗೆ ಪ್ರಸ್ತಾಪಿಸುವ ಅನೇಕ ಅಂಶಗಳು ಕೃತಿಯಲ್ಲಿ ದಾಖಲಾಗಿವೆ.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...
READ MORE