ಪ್ರಾಚೀನ ಕರ್ನಾಟಕದ ಅಧ್ಯಯನಕ್ಕೆ ಹೊಸ ಬಗೆಯ ಆಕರ ಸಾಮಗ್ರಿಯೆಂಬಂತಿರುವ ಈ ಗ್ರಂಥದಲ್ಲಿ ಒಟ್ಟು 134 ಕೈಫಿಯತ್ತುಗಳಿವೆ. 18ನೇ ಶತಮಾನದ ಉತ್ತರಾರ್ಧ ಮತ್ತು 19ನೇ ಶತಮಾನದ ಪೂರ್ವಾರ್ಧದಲ್ಲಿ ಮೆಕೆಂಝಿ ಸಂಗ್ರಹಿಸಿದ ಕೈಫಿಯತ್ತುಗಳೂ ಈ ಸಂಗ್ರಹದಲ್ಲಿವೆ.
ಸಂಪಾದಕರಾದ ಡಾ. ಎಂ.ಎಂ.ಕಲಬುರ್ಗಿಯವರು ಈ ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ 'ಕೈಫಿಯತ್ತು'ಗಳ ಇತಿಹಾಸ ತೆರೆದಿಟ್ಟಿದ್ದಾರೆ. ಇಲ್ಲಿಯೇ ಒಂದಡೆ (XVII) ಅವರು, ’ಈ ಕೈಫಿಯತ್ತುಗಳನ್ನು ಅಭ್ಯಾಸದ ಅನುಕುಲಕ್ಕಾಗಿ....’ ಮೈಸೂರು ಪ್ರದೇಶದ ಕೈಫಿಯತ್ತುಗಳು (53), ದಕ್ಷಿಣ-ಉತ್ತರ ಕನ್ನಡ ಜಿಲ್ಲೆಗಳ ಕೈಫಿಯತ್ತುಗಳು (54-100), ಬಳ್ಳಾರಿ ಪ್ರದೇಶದ ಕೈಫಿಯತ್ತುಗಳು(101-114), ಇತರ ಕೈಫಿಯತ್ತುಗಳು (115-134)ಎಂದು ಭೌಗೋಳಿಕ ಆಧಾರದ ಮೇಲೆ ವಿಂಗಡಿಸಿದ್ದಾರೆ. ಜೊತೆಗೆ ಬಳಸಿರುವ ಆಕರಗಳ ವಿವರ, ಈ ಕ್ಷೇತ್ರದಲ್ಲಿ ನಡೆದ ಅಧ್ಯಯನಗಳ ಮಾಹಿತಿ, ಕೈಫಿಯತ್ತುಗಳು ಚರಿತ್ರೆಯ ಅಧ್ಯಯನಕ್ಕೆ ಒದಗಿಸುವ ಉಪಯುಕ್ತತೆ ಮುಂತಾದ ಸಂಗತಿಗಳನ್ನು ನೀಡಿದ್ದಾರೆ. ರಾಜಕೀಯ, ಆಡಳಿತ, ಸಾಮಾಜಿಕ ಆಚರಣೆ, ಜಾತಿ, ಧಾರ್ಮಿಕ, ವಾಸ್ತುವಿಶೇಷತೆ, ಪ್ರಾದೇಶಿಕತೆ, ವಾಣಿಜ್ಯ, ಸಾಹಿತ್ಯ, ಬರವಣಿಗೆ-ಭಾಷೆ ಇವೆಲ್ಲವೂ ಸಮಾವಿಷ್ಟಗೊಂಡಿರುವ ಈ ಕೈಫಿಯತ್ತುಗಳ ದಾಖಲೀಕರಣ, ವಿಶೇಷವಾಗಿ ಮಧ್ಯಕಾಲೀನ ಕರ್ನಾಟಕದ ಜನಜೀವನವನ್ನು ಪರಿಚಯಿಸುವ ಬಹುದೊಡ್ಡ ಭಂಡಾರ ಎಂಬುದನ್ನು ಈ ಕೃತಿಯು ಪ್ರಸ್ತುತ ಪಡಿಸುತ್ತದೆ.
ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...
READ MORE