ಕನ್ನಡ ರಮಾರಮಣ ಕೃಷ್ಣದೇವರಾಯ ಸೂರ್ಯನಾಥ ಕಾಮತ್ ಅವರ ಐತಿಹಾಸಿಕ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ಕೃಷ್ಣದೇವರಾಯನ ಆಳ್ವಿಕೆಯನ್ನು (೧೫೦೯ - ೧೫೩೦) ಹಾಗು ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರ ಹೇಗೆ ವಿಜಯಗಳ ನಗರವಾಯಿತು ಎಂಬುದನ್ನು ವಸ್ತುವಾಗಿರಿಸಿಕೊಂಡು ಲೇಖಕರು ಈ ಕಾದಂಬರಿಯನ್ನು ಸುಂದರವಾಗಿ ಬರೆದಿದ್ದಾರೆ. ದುಷ್ಟ ಶಿಕ್ಷೆ, ಶಿಷ್ಟ ರಕ್ಷೆ ಮಾಡುತ್ತಾ, ಧರ್ಮ ಮಾರ್ಗಾನುವರ್ತಿಯಾಗಿ ಪ್ರಜೆಗಳಿಗೆ ಹಾದಿತೋರಿಸುತ್ತಾ, ಧರ್ಮದಿಂದ ರಾಜ್ಯಪಾಲಿಸಿ, ನ್ಯಾಯ ಯೋಗ್ಯವಾದ ಕಾರ್ಯಗಳನ್ನು ಸಂಗ್ರಹಿಸಿ,ದಾನಧರ್ಮ, ಯಜ್ಞಯಾಗಾದಿಗಳನ್ನು, ಪ್ರಜಾಹಿತದ ಕಾರ್ಯಗಳನ್ನು ಪ್ರಜೆಗಳಿಗೋಸ್ಕರವೇ ತನ್ನ ಜೀವವನ್ನು ತ್ಯಾಗಮಾಡಿ, ಕನ್ನಡರಾಜ್ಯ ರಮಾರಮಣ, ದಕ್ಷಿಣೋತ್ತರ ಸಮುದ್ರಾಧೀಶ್ವರ, ಯವನರಾಜ್ಯ ಪ್ರತಿಷ್ಠಾಪನಾಚಾರ್ಯ, ಗೋ ಬ್ರಾಹ್ಮಣ ಪ್ರತಿಪಾಲನಾಚಾರ್ಯ, ಹಿಂದೂ ರಾಯ ಸುರತ್ರಾಣ ಎಂಬ ಬಿರುದುಗಳನ್ನು ಪಡೆದ ಶತ ಕದನಗಳ ವೀರ, ಕೃಷ್ಣೆಗೂ ಆಚೆ ವರಾಹ ಧ್ವಜವನ್ನ ಮೆರಸಿದ ವೀರ, ವಿಜಯನಗರ ಸಾಮ್ರಾಜ್ಯವನ್ನು ನಿಜವಾಗಿಯೂ ವಿಜಯದ ರಾಜ್ಯವಾಗಿ ಕಟ್ಟಿದ ಮಹಾ ಪ್ರಚಂಡ ಕೃಷ್ಣದೇವನ ಮರಣದಿಂದ ಇಡೀ ವಿಜಯನಗರ ಸ್ತಬ್ಧವಾಗುತ್ತದೆ*.
ಸಾಹಿತಿ ಸೂರ್ಯನಾಥ ಕಾಮತ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. ತಂದೆ ಉಪೇಂದ್ರಕಾಮತ್, ತಾಯಿ ಪದ್ಮಾವತಮ್ಮ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಸ್ನಾತಕೋತ್ತರ ಪದವಿ ಗಳಿಕೆ. ಪ್ರಾಧ್ಯಾಪಕ, ಸಂಶೋಧಕ, ಇತಿಹಾಸ ಅವರ ಆಸಕ್ತಿಯ ಕ್ಷೇತ್ರಗಳು. ‘TULUVA IN VIJAYANAGAR TIMES’ ಅವರ ಪಿಎಚ್.ಡಿ. ಪ್ರಬಂಧ. ಉತ್ಥಾನ ಪತ್ರಿಕೆಯ ಸಹ ಸಂಪಾದಕರಾಗಿ, ಪ್ರಜಾವಾಣಿ ಸಹ ಸಂಪಾದಕರಾಗಿದ್ದರು. ‘ಕರ್ನಾಟಕದ ಇತಿಹಾಸ ಮಂಜರಿ, ಕರ್ನಾಟಕದ ವೀರರಾಣಿಯರು, ವಿಜಯನಗರ ಕಥೆಗಳು, ಕೆಳದಿಯ ಚೆನ್ನಮ್ಮಾಜಿ, ವೀರರಾಣಿ ಅಬ್ಬಕ್ಕ’ ಅವರ ಪ್ರಮುಖ ಕೃತಿಗಳು. ಥೇಮ್ಸ್ನಿಂದ ಗಂಗೆಗೆ, ಈಸಿ ಜೈಸಿದರು (ಸಾಮಾಜಿಕ) ; ಕೃಷ್ಣದೇವರಾಯ, ಮುಳ್ಳಿನಹಾದಿ ...
READ MORE