ಲೇಖಕ ಎನ್.ಎಸ್. ಮಹಂತೇಶ್ ಅವರ ಸಂಶೋಧನಾತ್ಮಕ ಕೃತಿ-ಚಿತ್ರದುರ್ಗ ಕೋಟೆ ಪರಿಸರದ ದೇವಾಲಯಗಳು: ಒಂದು ಸಾಂಸ್ಕೃತಿಕ ಅಧ್ಯಯನ. ಈ ಕೃತಿಯು 2008ರಲ್ಲಿ ಮೊದಲ ಮುದ್ರಣ ಕಂಡಿತ್ತು. ಚಿತ್ರದುರ್ಗದ ಪ್ರಾಚೀನ ಇತಿಹಾಸ, ಪಾಳೆಯಗಾರರ ಇತಿಹಾಸ, ಅಬೇಧ್ಯ ಕೋಟೆ-ಕೊತ್ತಲಗಳು, ದೇವಾಲಯಗಳು, ಶಾಸನಗಳು , ಜಾತ್ರೆ-ಉತ್ಸವ, ನಂಬಿಕೆ-ಆಚರಣೆ ಮುಂತಾದ ಅನೇಕ ಸಂಗತಿಗಳನ್ನು ಕುರಿತಂತೆ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿದ ಕೃತಿ ಇದು. ಅಗತ್ಯವಿರುವೆಡೆ ನಕ್ಷೆಗಳು, ಚಿತ್ರಗಳನ್ನು ಬಳಸುವ ಮೂಲಕ ಕೃತಿಯ ಮಹತ್ವ-ಗಂಭೀರತೆ ಹೆಚ್ಚಿಸಿದೆ.
ಲೇಖಕ ಡಾ. ಎನ್.ಎಸ್. ಮಹಾಂತೇಶ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನೆರಳಗುಂಟೆ ಗ್ರಾಮದವರು. ತಂದೆ ಎನ್.ಡಿ. ಶಿವಣ್ಣ ಹಾಗೂ ತಾಯಿ ರೇಣುಕಮ್ಮ. ಕುವೆಂಪು ವಿ.ವಿ.ಯಿಂದ ಎಂ.ಎ (ಇತಿಹಾಸ ಹಾಗೂ ಪ್ರಕ್ತನಾಶಾಸ್ತ್ರ, ಹುಣಸೆಕಟ್ಟೆ ಮನೆತನದ ಶ್ರೀಮತಿ ಶಾರದಾ ಚಂದ್ರಶೇಖರಪ್ಪ ಚಿನ್ನದ ಪದಕದೊಂದಿಗೆ ದ್ವಿತೀಯ ರ್ಯಾಂಕ್), ಕನ್ನಡ ವಿ.ವಿ.ಯಿಂದ ಎಂ.ಫಿಲ್ (ವಿಷಯ: ಹೊಸದುರ್ಗ ಪರಿಸರದ ದೇವಾಲಯಗಳು),ಕನ್ನಡ ವಿ.ವಿ.ಯಿಂದ ಪಿಜಿ ಡಿಪ್ಲೊಮಾ (ವಿಷಯ: ಹೊಸದುರ್ಗ ತಾಲೂಕಿನ ಶಾಸನಗಳು), ಕನ್ನಡ ವಿ.ವಿ. ಯಿಂದ ಹೊಸದುರ್ಗ ತಾಲೂಕು ಪರಿಸರ: ಸಾಂಸ್ಕೃತಿಕ ಅಧ್ಯಯನ’ ವಿಷಯವಾಗಿ (2013) ಪಿಎಚ್ ಡಿ. ಪದವೀಧರರು. ಇತಿಹಾಸ, ಪ್ರಾಗೈತಿಹಾಸ, ಶಾಸನ, ಹಸ್ತಪ್ರತಿ, ನಾಣ್ಯ, ...
READ MORE