ಪ್ರಗತಿಯ ವಿವಿಧ ಲಕ್ಷಣಗಳನ್ನು ಹದಿನೈದು ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ಆರಂಭದ ಅಧ್ಯಾಯಗಳಲ್ಲಿ ಜಗತ್ತು ಸಾಧಿಸಿರುವ ಪ್ರಗತಿಯ ಅಂಕಿ ಅಂಶಗಳ ವಿವರ ನೀಡಲಾಗಿದೆ. ವಿವಿಧ ದೇಶಗಳ ಒಟ್ಟಾರೆ ಜನಜೀವನದ ಬಗೆಗೆ ವೈವಿಧ್ಯಮಯ ಮಾಹಿತಿ ಒದಗಿಸಲಾಗಿದೆ. ಭಾರತದ ಆಹಾರ ಉತ್ಪಾದನೆ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಪ್ರಗತಿಯ ನಡುವಿನ ಅಂತರ, ಕೃಷಿ ಸಮಸ್ಯೆ ಮುಂತಾದ ವಿಷಯ ಚರ್ಚೆ ಮಾಡಲಾಗಿದೆ. ಅಂತಿಮ ಹಂತದ ಅಧ್ಯಾಯಗಳಲ್ಲಿ ವ್ಯಕ್ತಿಗತ ನೆಲೆಯಲ್ಲಿ ಸಾಧಿಸಬೇಕಾದ ಪ್ರಗತಿ ಹಾಗೂ ಭಾರತೀಯ ಧಾರ್ಮಿಕ ಬದುಕಿಗೆ ಸಂಬಂಧಿಸಿದ ವಿಷಯ ಕುರಿತ ಸಂಕ್ಷಿಪ್ತ ವಿವರಣೆಯಿದೆ. ಪ್ರಗತಿ ಕುರಿತ ಪ್ರಾಥಮಿಕ ತಿಳಿವಳಿಕೆಗೆ ಉಪಯುಕ್ತವಾಗಿದೆ.
’ವೇದಾಂಗ ವಿದ್ವಾನ್’ ಆರ್. ಎಲ್. ಕಶ್ಯಪ ಅವರು ವೇದ ಮತ್ತು ವೇದಾಂಗ ಪರಿಣಿತರು. ಕಶ್ಯಪ ಅವರು ನಾಲ್ಕು ವೇದಗಳಿಗೆ ಭಾಷ್ಯ ಬರೆದಿದ್ದಾರೆ. ಕೃತಿಗಳು: ಋಗ್ವೇದ ಸಂಹಿತಿ, ಮಂಡಲ -1, ವ್ಯಕ್ತಿ ಹಾಗೂ ಸಮೂದಾಯಗಳ ಪ್ರಗತಿ, ಋಭುಗಳು, ವೇದ ಹಾಘೂ ಉಪನಿಷತ್ತುಗಳ ಋಷಿಗಳು, ಋಗ್ವೇದ ಶಬ್ದಾರ್ಥ ವಿಚಾರ, ಪವಮಾನ, ಆಧುನಿಕ ಕಾಲಕ್ಕೆ ವೇದ ಜ್ಞಾನ, ತೈತ್ತಿರೀಯ ಅರಣ್ಯಕ, ಭಾಗ-2, ಸಾಮವೇದ ಪೂರ್ವಾರ್ಚಿಕ, ...
READ MORE