ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿಸಿಕೊಡುವಷ್ಟು ಪೋಷಕರಿಗೆ ಸಮಯ, ವ್ಯವಧಾನ ಇಲ್ಲವಾಗಿದೆ. ಸಂಸ್ಕಾರದಿಂದ ಹರಿದು ಬರುವ ಮೌಲ್ಯಗಳು, ಪರಂಪರೆಯನ್ನು ಈ ಪುಟ್ಟ ಪುಸ್ತಕ ತೆರೆದಿಡುತ್ತದೆ. ಹಬ್ಬದ ಆಚರಣೆಯಲ್ಲಿ ಹೇಳಬೇಕಾದ ಶ್ಲೋಕಗಳನ್ನು, ಸನ್ನಡತೆಯ ವಿಚಾರಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ ಲೇಖಕಿ. ಈ ಕೃತಿ ಐದು ಮುದ್ರಣ ಕಂಡಿದೆ.
ಲೀಲಾ ಪ್ರಕಾಶ್ ಕೆ., ಎಂ.ಎ., ಪಿಎಚ್.ಡಿ.(ಸಂಸ್ಕೃತ) ಪದವೀಧರರು. ಸುಶ್ರುತ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿದ್ದಾರೆ. 1959ರ ಜುಲೈ 18ರಂದು ಜನನ. ಡಾ. ಕೆ. ಕೃಷ್ಣಮೂರ್ತಿ, ಸರೋಜಮ್ಮಅವರ ಮಗಳಾಗಿ ಧಾರವಾಡದಲ್ಲಿ ಜನಿಸಿದರು. ವಿಮಲಾ (2004)ರಲ್ಲಿ ಪ್ರಕಟವಾದ ಕಾದಂಬರಿ. ಅನಿವಾಸಿ ಹಾಗೂ ಇತರೆ ಕಥೆಗಳು (2008) ಕವನ ಸಂಕಲನ : ಸಮನ್ವಿತಾ, ಕಾವ್ಯವಲ್ಲರಿ (2006) ಕಥಾಸಂಕಲನಗಳನ್ನು ಹೊರತಂದಿದ್ದಾರೆ. ವೈದ್ಯಕೀಯ ಸುಭಾಷಿತ ಸಾಹಿತ್ಯ (2002) ಕನ್ನಡಕ್ಕೆ ಭಾಷಾಂತರಿಸಿದ್ದು, ಕನ್ನಡ ಭಗವದ್ಗೀತೆ (2005) ಪ್ರಕಟವಾಯಿತು. ಸಿರಿಗನ್ನಡ ಭಗವದ್ಗೀತೆ (ಕನ್ನಡಕ್ಕೆ ರೂಪಾಂತರ) ರಚಿಸಿದ್ದಾರೆ. ಹೊಯ್ಸಳ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' 'ಕೆ.ಎಸ್. ನರಸಿಂಹಸ್ವಾಮಿ ರಾಜ್ಯ ಪ್ರೇಮಕವಿ ಪ್ರಶಸ್ತಿ', ...
READ MORE