‘ಆತ್ಮಗುಣ 8 ಇದ್ದರೆ ನೆಮ್ಮದಿ’ ಜಗದೀಶ ಶರ್ಮಾ ಅವರ ರಚನೆಯ ಕೃತಿಯಾಗಿದೆ. 'ಯಾರು ನೀನು?' ಎಂದು ಪರಿಚಯ ಕೇಳಿದರೆ- 'ನಾನೆಂದರೆ ದಯಾವಂತ; ನಾನೆಂದರೆ ಸಹನಶೀಲ; ನಾನೆಂದರೆ ಅಸೂಯೆ ಇಲ್ಲದವ; ನಾನೆಂದರೆ ಪರಿಶುದ್ಧ; ನಾನೆಂದರೆ ಸರಿಯಾದ್ದನ್ನೇ ಮಾಡುವವ; ನಾನೆಂದರೆ ದಾನಶೀಲ' ಎಂದೆಲ್ಲ ಪರಿಚಯ ಹೇಳಬೇಕು ಎನ್ನುತ್ತಾರೆ ಋಷಿಗಳು. ಇವು ಆತ್ಮಗುಣಗಳು. ಮನುಷ್ಯ ನೆಮ್ಮದಿಯಾಗಿರಲು ಬೇಕಾಗುವ ಆ ಆತ್ಮಗುಣದ ಬಗ್ಗೆ ತಿಳಿಸುವ ಕೃತಿ ಇದು.
ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ...
READ MORE