ಯಾವುದೇ ವೃತ್ತಿಯ ಅಭಿವೃದ್ದಿಗೆ ಆ ವೃತ್ತಿಪರರಲ್ಲಿ ವೃತ್ತಿಯನ್ನು ಬೆಳೆಸುವ ಬದ್ದತೆ, ಆ ನಿಟ್ಟಿನಲ್ಲಿನ ಕಾರ್ಯಕ್ಷಮತೆ ಮತ್ತು ಸಾಂಘಿಕ ಪ್ರಯತ್ನಗಳು ಪ್ರಮುಖವಾಗುತ್ತವೆ. ಸಮಾಜಕಾರ್ಯ ವೃತ್ತಿಪರತೆ ಹೇಗಿರಬೇಕು ಎಂಬುದರ ಕುರಿತು ಈ ಕೃತಿಯು ವಿಶ್ಲೇಷಿಸಿದೆ. ಈ ಪುಸ್ತಕದಲ್ಲಿ ನಿರೂಪಿಸಲಾಗಿರುವ ವಸ್ತು ವಿಷಯಗಳು ವೈಜ್ಞಾನಿಕ ಸಮಾಜಕಾರ್ಯದ ಎಲ್ಲಾ ರೂಪಗಳನ್ನು ಒಳಗೊಂಡಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಸಮಾಜಕಾರ್ಯವನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ ಮತ್ತು ವ್ಯಕ್ತಿಗತ ಸಮಾಜಕಾರ್ಯ ಆಚರಣೆ ಮಾಡುತ್ತಿರುವ ವೃತ್ತಿಪರರಿಗೆ ಪ್ರಮುಖವಾದ ಸಾಧನವಾಗುತ್ತದೆ.
ಗಂಗಾಧರ ರೆಡ್ಡಿ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರು. ತಾಯಿ ಲಕ್ಷ್ಮಮ್ಮ ತಂದೆ ನಾರಾಯಣಸ್ವಾಮಿ. ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಹಾಗೂ ಎಂ.ಫಿಲ್ ಪದವಿಗಳನ್ನು ಗಳಿಸಿದ ನಂತರ ಮಕ್ಕಳ ಹಕ್ಕುಗಳ ಸಂರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಕರ್ನಾಟಕದ ಹಲವು ಸಂಸ್ಥೆ ಮತ್ತು ಜಾಲ (ನೆಟ್ವರ್ಕ್) ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಜೊತೆಗೆ ಉಸಿರಿಗಾಗಿ ಹಸಿರು’ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಪರಿಸರ ಸಂರಕ್ಷಣೆ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಂಘಟನೆ ಜನ್ಮತಳೆದ ಮೊದಲ ವರ್ಷದಲ್ಲೇ ಯೂಥ್ ಫಾರ್ ಸೇವಾ ಸಂಸ್ಥೆ ನೀಡುವ ‘ಯುವಚೇತನ – ಅತ್ಯುತ್ತಮ ...
READ MORE