ವಚನೋತ್ಸವ-ಕೃತಿಯು ಯಲ್ಲಪ್ಪ ಹಲಕುರ್ಕಿ ಅವರ ವಚನಗಳ ಸಂಕಲನ. 101 ವಚನಗಳನ್ನು ಒಳಗೊಂಡಿದೆ. ಧಾರವಾಡದ ಬಹುಭಾಷಾ ಕವಿ ಡಾ.ಪಂಚಾಕ್ಷರಿ ಹಿರೇಮಠರ ಮುನ್ನುಡಿ, ನವಲಗುಂದದ ವಚನಕಾರ ಡಾ.ಸಂಗಮೇಶ ಹಂಡಗಿಯವರ ನಲ್ನುಡಿ ಹಾಗೂ ಗದುಗಿನ ಅನ್ನದಾನಿ ಹಿರೇಮಠರ ಅವರು ಸಂಕಲನದ ವಚನಗಳ ಮೌಲ್ಯವನ್ನು ಪ್ರಶಂಸಿಸಿದ್ದಾರೆ.
ವಚನಗಳು ಬಯಲು ಸೀಮೆಯ ಪರಿಸರ ಚಿತ್ರಣ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ವಿಶೇಷ ಆಸಕ್ತಿ ವಹಿಸಿವೆ. ಅಧ್ಯಾತ್ಮಹಾಗೂ ಲೌಕಿಕತೆಯ ಅನುಭವ-.ಅನುಭಾವವೂ ಇದೆ. ಭಾಷೆ. ನಿರೂಪಣೆಯೂ ಆಪ್ತವೆನಿಸುತ್ತವೆ ಎಂದು ಶ್ಲಾಘಿಸಿದ್ದಾರೆ.
ಯಲ್ಲಪ್ಪ ಹಲಕುರ್ಕಿ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ (01-06-1954) ಯಾವಗಲ್ ಗ್ರಾಮದವರು. 13 ಗ್ರಂಥಗಳನ್ನು ರಚಿಸಿದ್ದಾರೆ. ವಚನ, ಕವನ, ಜೀವನ ಚರಿತ್ರೆ ರಚಿಸಿದ್ದು, ರಾಜ್ಯ ವಚನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ. ಆಕಾಶವಾಣಿಯಲ್ಲಿ 200ಕ್ಕೂ ಹೆಚ್ಚು ಕವನಗಳು ಪ್ರಸಾರವಾಗಿವೆ. ಬಾಲ್ಯದಲ್ಲಿ ಬಡತನದ ಕರಾಳ ಅನುಭವ, ಸಜ್ಜನರ ಸಂಗ, ಬಯಲುಸೀಮೆ ಪರಿಸರ, ವಾಸ್ತವ ಸಮಾಜ ಇವರ ಕಾವ್ಯಕ್ಕೆ ಪ್ರೇರಣೆಯಾಗಿವೆ. ಡಿವೈನ್ ಔರಾ ಮತ್ತು ಡಿವೈನ್ ಲೈಟ್ ಈ ಎರಡೂ ...
READ MORE