ಕವಿ ಹಾಗೂ ಲೇಖಕ ಸುಭಾಶ್ಚಂದ್ರ ಶೆಟ್ಟಿ, ಬಾಚನಾಳ ಅವರ ಕೃತಿ-ಶರಣರ ಸ್ಮರಣೆ. ಹೆಸರೇ ಸೂಚಿಸುವಂತೆ 12ನೇ ಶತಮಾನದ ವಚನಕಾರರ ಜೀವನ ಸಾಧನೆ ವಿವರಿಸಿದ ಕೃತಿ. ಸಾಮಾಜಿಕ, ರಾಜಕೀಯ,ಧಾರ್ಮಿಕ, ಆರ್ಥಿಕ ಹಾಗೂ ಒಳನೋಟಗಳಿಗೆ ಶರಣ ಚಳವಳಿ ನೀಡಿದಷ್ಟು ಪ್ರೇರಣೆ ಮಿಕ್ಕ ಕಾಲಘಟ್ಟಗಳಲ್ಲಿ ಸಿಗುವುದು ಕಡಿಮೆ. ಹೀಗಾಗಿ, ಶರಣರ ಚಳವಳಿ ಇಂದಿಗೂ ವಿದ್ವಾಂಸರ ಚರ್ಚೆ ಚಿಂತನೆಗಳಿಗೆ ಗ್ರಾಸವಾಗುತ್ತಿದೆ. ಕಾಲಗರ್ಭದಲ್ಲಿ ಹುದುಗಿರುವ ಸತ್ಯಸಂಗತಿಗಳು ಸಂಶೋಧನೆ ಚಿಂತನೆ ಹಾಗೂ ತಾರ್ಕಿಕ ಆಲೋಚನೆಗಳೊಂದಿಗೆ ಸ್ಪಷ್ಟವಾಗಬೇಕು. ಲೇಖಕರು ಶರಣರ ಜನ್ಮಸ್ಥಳ ಕುರಿತ ಒಳನೋಟಗಳನ್ನುಕಟ್ಟಿಕೊಡಲು ಯತ್ನಿಸಿದ್ದಾರೆ.
ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು. ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...
READ MORE