’ಸಂಗಮನಾಥ’ ಅಂಕಿತನಾಮದೊಂದಿಗೆ ಲೇಖಕ ಸಂಗಮನಾಥ ರೇವತಗಾಂವ್ ಅವರು 212 ವಚನಗಳನ್ನು ಬರೆದಿದ್ದಾರೆ. ಶರಣರ ಜೀವನ ಹಾಗೂ ವಚನಗಳ ಪ್ರಭಾವದಿಂದ ವ್ಯಂಗ್ಯ ಹಾಗೂ ವಿಡಂಬನಾತ್ಮಕವಾಗಿ ಸಮಾಜದ ದೋಷಗಳನ್ನು ಎತ್ತಿ ತೋರಿಸಿದ್ದಾರೆ.
ವಚನಗಳಲ್ಲಿ ಯಾರ ಮನಸ್ಸುನ್ನೂ ನೋಯಿಸಿಲ್ಲ. ಆದರೆ, ಪ್ರಸ್ತುತ ಸಾಮಾಜಿಕ-ರಾಜಕೀಯ-ಜಾಗತೀಕರಣದ ವಿದ್ಯಮಾನಗಳನ್ನು ಮೂಲ ಶರಣರ ವಿಚಾರಗಳಿಗೆ ಹೋಲಿಸಿ ಅಚ್ಚರಿಪಟ್ಟಿದ್ದಾರೆ. ಮೂಲ ಶರಣರ ನಡೆಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದೂ ತಮ್ಮ ವಿಚಾರಗಳನ್ನು ತಮ್ಮದೇ ಧಾಟಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಸದ್ಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರಾಗಿರುವ ಸಂಗಮನಾಥ ರೇವತಗಾಂವ್ ಅವರು ಬರವಣಿಗೆ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಆರು ಪುಸ್ತಕಗಳು ಪ್ರಕಟವಾಗಿವೆ. ಅನೇಕ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಬಿ.ಕಾಂ. ಪದವೀಧರರಾದ ಅವರು ಮೂಲತಃ ಕಲಬುರಗಿಯವರು.ಸಂಗಮನಾಥನ ಆಧುನಿಕ ವಚನಗಳು, ಬಾಲಚಂದ್ರ ಜಯಶೆಟ್ಟಿ, ಶಾಲಾ-ಕಾಲೇಜುಗಳಲ್ಲಿ ಗ್ರಂಥಾಲಯ, ಕಲಬುರಗಿ ತಾಲೂಕು ದರ್ಶನ ಇವರ ಕೃತಿಗಳು. ...
READ MORE