‘ಶರಣರ ವಚನಗಳು’ ಲೇಖಕಿ ಅಂಜನಾ ಕೃಷ್ಣಪ್ಪ ಅವರು ವಚನಗಳ ಕುರಿತು ರಚಿಸಿರುವ ಕೃತಿ. 12ನೇ ಶತಮಾನದಿಂದ ಈ ಹೊತ್ತಿನವರೆಗೂ ವಚನಗಳು ಸಾಂಸ್ಕೃತಿಕವಾಗಿ ಉಂಟು ಮಾಡಿದ ಪರಿಣಾಮ ಚಿಗುರುಗೊಳಿಸುತ್ತವೆ. ವಚನಗಳು ಬಹು ಆಯಾಮಗಳನ್ನು ಹೊಂದಿರುವುದರಿಂದ ಅವು ಹಲವು ನೆಲೆಯಲ್ಲಿ ಚಿಂತನೆಗೆ ಒಳಗಾಗಿವೆ. ಚಿಂತನೆಗೆ ನೆಲೆಯೂ ಆಗಿ ನಿಂತಿವೆ.
ವಿದ್ವಾಂಸರು, ಚಿಂತಕರು ವಚನಗಳ ಮೂಲಕ ತಮ್ಮ ಕಾಲದ ವಿದ್ಯಮಾನಗಳನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ಆಧುನಿಕ ಸಾಹಿತ್ಯ ಸೃಷ್ಟಿಯ ಹಿಂದೆ ವಚನಗಳ ಅಧ್ಯಯನದ ಛಾಯೆ ಇದೆ. ಅಂಜನಾ ಕೃಷ್ಣಪ್ಪನವರು ವಚನಗಳನ್ನು ಅಧ್ಯಯನ ಮಾಡಿದ ರೀತಿ ಹಾಗೂ ಅವುಗಳಿಂದ ಪಡೆದ ಪ್ರೇರಣೆಗಳು ಈ ಕೃತಿಯ ವಿಶೇಷತೆ.
ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...
READ MORE