ಹರ್ಡೇಕರ್ ಮಂಜಪ್ಪನವರು ಬರೆದ ಕೃತಿ-ಪ್ರಥಮಾಚಾರ ದೀಪಿಕೆ. ಭಕ್ತಿ, ಜ್ಞಾನ, ಕರ್ಮ, ಯೋಗ ಹೀಗೆ ಬೇರೆ ಬೇರೆ ಗುಣಶೀಲಗಳ ವಿಶೇಷತೆಗಳನ್ನು ಹೊಂದಿದ್ದ ಶರಣ-ಶರಣೆಯರು 12ನೇ ಶತಮಾನದಲ್ಲಿ ಸರ್ವ ಸಮಾನತೆಯ ತಳಹದಿಯ ಮೇಲೆ ಸಮಾಜ ನಿರ್ಮಿಸಲು ಶ್ರಮಿಸಿದವರು. ಈ ಕೃತಿಯಲ್ಲಿ ಆದ್ಯರ ವಚನ ಪರುಷ ಕಂಡಯ್ಯ, ಬೇಕು-ಬೇಡೆಂಬುದಿಲ್ಲ, ಅಂಜೇ; ಅಂಜುವೆ, ಛಲಬೇಕು ಶರಣಂಗೆ, ಜಂಗಮಜ್ಯೋತಿ, ಲಿಂಗಲೀಲೆ ಹೀಗೆ ವಿವಿಧ ಅಧ್ಯಾಯಗಳ ಮೂಲಕ ಶರಣರ ನಡೆ-ನುಡಿಯನ್ನು ಕಟ್ಟಿಕೊಟ್ಟಿದ್ದಾರೆ.
ಹರ್ಡೇಕರ್ ಮಂಜಪ್ಪ ಅವರು (ಜನನ: 18-02-1886) ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಜನಿಸಿದರು. ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲೆ ಶಿಕ್ಷಕರಾದರು. ನಂತರ 1905ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು. ಮಂಜಪ್ಪನವರು ಕೆಲಸಕ್ಕೆ ರಾಜೀನಾಮೆ ನೀಡಿ ಅಣ್ಣ ಜೊತೆ ದಾವಣಗೆರೆಯಲ್ಲಿ ‘ಧನುರ್ಧಾರಿ’ ಪತ್ರಿಕೆ ಆರಂಭಿಸಿದರು. ಲೋಕಮಾನ್ಯ ಟಿಳಕರು ಕೇಸರಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳನ್ನು ಅನುವಾದಿಸಿ ಪ್ರಕಟಿಸುತ್ತಿದ್ದರು. ಇದನ್ನು ಇಷ್ಟಪಡದ ಮುದ್ರಕರು ನಿರಾಕರಿಸಿದ್ದರಿಂದ ಪತ್ರಿಕೆ ನಿಂತುಹೋಯಿತು. 1908ರಲ್ಲಿ ಸ್ವಂತ ಮುದ್ರಣಯಂತ್ರ ಹೊಂದಿಯೂ ಮತ್ತೆ ಪತ್ರಿಕೆ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ರಾಷ್ಟ್ರೀಯತಾವಾದಿಯ ಪ್ರಭಾವದಿಂದ ಬ್ರಹ್ಮಚರ್ಯ ಘೋಷಿಸಿಕೊಂಡು 1911ರಲ್ಲಿ ಟಿಳಕರನ್ನು ಭೇಟಿಯಾದರು. ಹರಿಹರ ರೈಲ್ವೆ ನಿಲ್ದಾಣ ಬಳಿಯ ...
READ MORE