ಲೇಖಕ ಶಿವಕವಿ ಹಿರೇಮಠ ಜೋಗುರ ಅವರ ಕೃತಿ-ಶಿವಕವೀಶನ ವಚನಾಮೃತ ಭಾಗ-2. ಲೇಖಕರೇ ಬರೆದ ವಚನಗಳನ್ನು ಇಲ್ಲಿ ಸಂಕಲಿಸಲಾಗಿದೆ. ಆಧುನಿಕ ವಚನಗಳು. ನಾಡು ನುಡಿ ಸಮಾಜ ಧರ್ಮ ಹಾಸ್ಯ ವಿಡಂಬನೆ ವಿಶ್ಲೇಷಣೆ, ಸಮಾಜದ ಅಂಕು ಡೊಂಕು ತಿದ್ದುವ, ರಾಜಕಾರಣದಲ್ಲಿಯ ಅರಾಜಕತೆ, ಆಧ್ಯಾತ್ಮ ಮಾರ್ಗದರ್ಶನ ನೀತಿ ಬೋಧನೆಗಳು ವಚನಾಮೃತ ಕೃತಿಯ ಪ್ರಮುಖ ಅಂಶಗಳಾಗಿವೆ.
ಲೇಖಕ ಶಿವಕವಿ ಹಿರೇಮಠ ಜೋಗುರ ಅವರು ಕಲಬುರಗಿ ಜಿಲ್ಲೆಯ ಜೋಗೂರ ಹಿರೇಮಠ ಸಂಸ್ಥಾನದ ವೀರಮಾಹೇಶ್ವರ ವಂಶಜರು. ತಂದೆ ಚಿತ್ರಶೇಖರಯ್ಯ ತಾಯಿ ಗಂಗಮ್ಮ .ಇವರ ಮೂಲ ಹೆಸರು ಶಿವಪೂಜಯ್ಯ. ಆದರೆ, ಕಾವ್ಯನಾಮ ಶಿವಕವಿ . ಪುರಾಣ ಪ್ರವಚನದೊಂದಿಗೆ ಸಾಹಿತ್ಯದ ಸೇವೆಯೂ ಇವರನ್ನು ಆಕರ್ಷಿಸಿದೆ. ತಮ್ಮದೇ ಆದ ಜ್ಞಾನಗಂಗಾ ಪ್ರಕಾಶನ ಸ್ಥಾಪಿಸಿದ್ದಾರೆ. ಕಲಬುರಗಿ ತಾಲೂಕಿನ ಹೊನ್ನಕಿರಣಗಿಯ ಶ್ರೀಮಠದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದಿದ್ದು 10ನೇ ತರಗತಿಯವರೆಗೆ ಮಾತ್ರ. 9ನೇ ವಯಸ್ಸಿನಲ್ಲೇ ನಾಟಕರಂಗದತ್ತ ಆಕರ್ಷಿತರಾಗಿ, ಮುಂದೆ 1977ರಲ್ಲಿ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ನಾಟ್ಯ ಸಂಘ ಸ್ಥಾಪಿಸಿದರು. 1982ರಲ್ಲಿ, ಗಂವಾರದಲ್ಲಿ ಶ್ರೀ ವಿಶ್ವಾರಾಧ್ಯ ನಾಟ್ಯ ಸಂಘ ಸ್ಥಾಪಿಸಿದರು. ...
READ MORE