ಗಣದಾಸಿ ವೀರಣ್ಣನವರ ವಚನಗಳು-ಕೃತಿಯನ್ನು ರಚಿಸಿದವರು ಫ.ಗು. ಹಳಕಟ್ಟಿ. ವಚನ ಸಾಹಿತ್ಯ ಸಂಗ್ರಹದ ಪಿತಾಮಹ ಎಂದೇ ಖ್ಯಾತಿಯ ಅವರು, ಶಿವಶರಣ ಗಣದಾಸಿ ವೀರಣ್ಣನವರ ವಚನಗಳನ್ನು ಸಂಪಾದಿಸಿದ್ದೂ ಸೇರಿದಂತೆ ಆತನ ಜೀವನ ವೃತ್ತಾಂತವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಹಸ್ತಲಿಖಿತ ದಾಖಲೆಯಿಂದ ಮೊದಲ ಬಾರಿಗೆ ಇಲ್ಲಿಯ ವಚನಗಳನ್ನು ಮುದ್ರಿಸಲಾಗಿದೆ. ಬಹುತೇಕ ಈ ವಚನಗಳು ಅಷ್ಟಾವರಣಕ್ಕೆ ಸಂಬಂಧಿಸಿವೆ.
‘ವಚನ ಪಿತಾಮಹ’ ಎಂದೇ ಪ್ರಸಿದ್ಧರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು. ಧಾರವಾಡದಲ್ಲಿ 1880ರ ಜುಲೈ 2ರಂದು ಜನಿಸಿದರು. ತಂದೆ ಗುರುಬಸಪ್ಪ, ತಾಯಿ ದಾನಾದೇವಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಉನ್ನತ ಶಿಕ್ಷಣವನ್ನು ಮುಂಬಯಿನಲ್ಲಿ ಪಡೆದರು. 1904ರಲ್ಲಿ ಎಲ್ಎಲ್ ಬಿ ಪದವಿ ಪಡೆದ ನಂತರ ವಕೀಲಿ ವೃತ್ತಿ ಆರಂಭಿಸಿದರು. 1923ರಲ್ಲಿ ಬಿಜಾಪುರದಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿದ್ದರು. ಮುಂಬಯಿ ವಿಧಾನಸಭಾ ಸದಸ್ಯರೂ ಆಗಿ ಆಯ್ಕೆಯಾಗಿದ್ದರು. ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು. ...
READ MORE