ಎಲ್ಲಾ ಕಾಲವು ಶ್ರೇಷ್ಟ ಒಳ್ಳೆಯಕಾಲ ಅಥವಾ ಕೆಟ್ಟಕಾಲ ಎಂದು ಕಾಲವನ್ನು ವಿಂಗಡಿಸುವುದನ್ನು ವಿರೋಧಿಸಿದರು ಬಸವಣ್ಣನವರು. ಇಂತಹ ಅನೇಕ ಸೂಕ್ತಿಗಳಿಂದ ಜನಮನ ಗೆದ್ದವರು ಬಸವಣ್ಣ. ಅವರ ಬದುಕು-ಸಮಾಜಕ್ಕೆ ನೀಡಿದ ಕೊಡುಗೆ-ವಚನಾರ್ಥ ಮುಂತಾದವುಗಳ ಕುರಿತು ಲೇಖಕ ರಂಜಾನ್ ದರ್ಗಾ ಅವರು ಚರ್ಚಿಸಿದ್ದಾರೆ.
ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ. ಪ್ರಶಸ್ತಿಗಳು: 2022ನೇ ಸಾಲಿನ ಕರ್ನಾಟಕ ...
READ MORE