ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಅವರು ಬಿ.ಇಡಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಚಿಸಿರುವ ಕೃತಿ-ಶೈಕ್ಷಣಿಕ ಮನೋವಿಜ್ಞಾನ. ಮನೋವಿಜ್ಞಾನ, ಪ್ರಜ್ಞಾ ಮನೋವಿಜ್ಞಾನ, ಸಾಮಾನ್ಯ ಮನೋವಿಜ್ಞಾನ, ವರ್ತನಾ ಮನೋವಿಜ್ಞಾನ, ಅಂತರ್ ಅವಲೋಕನ ಪದ್ಧತಿ, ವೀಕ್ಷಣಾತ್ಮಕ ಹಾಗೂ ವಿವರಣಾತ್ಮಕ ವಿಧಾನಗಳು ಕುರಿತು ವಿವರಿಸಿದ್ದಾರೆ. ಬೆಳವಣಿಗೆ, ವಿಕಾಸ, ಅವುಗಳ ವ್ಯತ್ಯಾಸ, ಅರ್ಥ, ನಿರೂಪಣೆ, ದೈಹಿಕ ಭಾವನಾತ್ಮಕ, ನೈತಿಕ, ಜ್ಞಾನಾತ್ಮಕ, ಸಾಮಾಜಿಕ ವಿಕಾಸಗಳು, ತಜ್ಞರ ವ್ಯಾಖ್ಯಾನಗಳು, ಲೇಖಕರು ವಿಷಯ ನಿರೂಪಣೆಗೆ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ವ್ಯಕ್ತಿತ್ವ, ವೈಯಕ್ತಿಕ ಭಿನ್ನತೆ ಗಳ ಬಗ್ಗೆಯೂ ಲೇಖಕರು ವಿಷಯವನ್ನು ಸರಳವಾಗಿ ನಿರೂಪಿಸಿದ್ದು, ವಿದ್ಯಾರ್ಥಿಗಳಿಗೆ ವಿಷಯ ಗ್ರಹಿಕೆ ಸುಲಭವಾಗುವಂತಿದೆ ಎಂದು ಕೃತಿಗೆ ಮುನ್ನುಡಿ ಬರೆದ ಪ್ರೊ. ಎಸ್.ಎಂ. ಸಜ್ಜನರ್ ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಡಾ. ತಿಮ್ಮಯ್ಯಶೆಟ್ಟಿ ಇಲ್ಲೂರು ಅವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದವರು. ಎಂ.ಎ. (ಇತಿಹಾಸ) ಹಾಗೂ ಎಂ.ಇಡಿ ಪದವೀಧರರು. ಶಿಕ್ಷಣ ಶಾಸ್ತ್ರ ವಿಷಯದಲ್ಲಿ ಪಿ.ಹೆಚ್. ಡಿ. ಪದವಿ ಪಡೆದಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟಿಯ ಶ್ರೀ ಘನಮಠೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪ-ಪ್ರಾಚಾರ್ಯರಾಗಿ ನಂತರ ಸದ್ಯ, ರಾಯಚೂರು ಜಿಲ್ಲೆಯ ಮಾನ್ವಿಯ ಶಾರದಾ ವಿದ್ಯಾನಿಕೇತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಾವ್ಯನಾಮ-ಮದರಕಲ್ಲ ಕಂದ. ಕಾವ್ಯ, ಮಕ್ಕಳ ಕಾವ್ಯ, ನಗರೇಶ್ವರ ಅಂಕಿತದಲ್ಲಿ ಆಧುನಿಕ ವಚನಗಳು, ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತೆ ಆಧಾರಿತ ತ್ರಿಪದಿಗಳು, ಗಜಲ್, ಕಥೆ ಮತ್ತು ಲೇಖನಗಳನ್ನು ಬರೆದಿದ್ದಾರೆ. ಇವರ ಹಲವಾರು ...
READ MORE