ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಮಾನಸ ಲೋಕ. ಮನಸ್ಸು ಚಂಚಲ. ಅದನ್ನು ನೋಡಲಾಗದು. ಆದರೆ, ಅದರ ವಿಚಾರಗಳನ್ನು ತಿಳಿಯಬಹುದು. ಹೀಗೆ ವಿಚಾರಿಸಲೂ ಮನಸ್ಸು ಕಾರಣ. ಅದು ನಾವು ಬೆಳೆದು ಬಂದ ಪರಿಸರ, ತೆಗೆದುಕೊಂಡ ಶಿಕ್ಷಣ ಎಲ್ಲವೂ ಕಾರಣವಾಗಿರುತ್ತದೆ. ಮನಸ್ಸು ರೂಪುಗೊಳ್ಳುವುದು ಅನುವಂಶೀಯತೆ ಮೇಲೂ ಹಾಗೂ ಪರಿಸರದ ಮೇಲೂ ಅವಲಂಬಿತವಾಗಿರುತ್ತದೆ. ಕೆಲವೊಂದು ಸಲ, ಈ ಎರಡರ ಫಲವೂ ಆಗಿರುತ್ತದೆ. ಮನಸ್ಸು, ಮನಸ್ಸಿನ ಚಟುವಟಿಕೆಗಳು, ಅದರ ನಿಯಂತ್ರಣ ಹೇಗೆ? ಇತ್ಯಾದಿ ಅಂಶಗಳ ಕುರಿತು ಮನೋವೈದ್ಯರಾದ ಲೇಖಕರು ಇಲ್ಲಿ ವಿವರಿಸಿದ್ದಾರೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE