ಟೆನ್ಶನ್ ತಗ್ಗಿಸಿ, ಆರೋಗ್ಯ ವೃದ್ಧಿಸಿ-ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ. ಒತ್ತಡವಿಲ್ಲದೇ ಬದುಕಿಲ್ಲ. ಅದು ಹೂವಿನ ಹಾಸಿಗೆಯೂ ಅಲ್ಲ. ಎಡರು-ತೊಡರುಗಳು ಸಾಮಾನ್ಯ. ಕಷ್ಟ ಮಾತ್ರವಲ್ಲ; ಅವಮಾನ-ಯಾತನೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅನಿವಾರ್ಯದ ಈ ಬದುಕನ್ನು ಮುಂದುವರಿಸಲೇ ಬೇಕು. ಇಂತಹ ಸಂದಿಗ್ದತೆಯಲ್ಲಿ ಒತ್ತಡವನ್ನು ತಗ್ಗಿಸಿಕೊಂಡು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದರಲ್ಲಿ ಬದುಕಿನ ಕಲೆ ಅಡಗಿದೆ. ಇಂತಹ ಮಹತ್ವದ ಸಂಗತಿಗಳನ್ನು ಲೇಖಕರು ವಿವರಿಸಿದ್ದೇ ಈ ಕೃತಿ. ಡಾ. ವಸುಂಧರಾ ಭೂಪತಿ ಅವರು ಕೃತಿಯ ಪ್ರಧಾನ ಸಂಪಾದಕರು.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE