ಲೇಖಕಿ ಎ.ಪಿ. ಮಾಲತಿ ಅವರು ಮಕ್ಕಳ ಲಾಲನೆ-ಪಾಲನೆ-ಆರೋಗ್ಯ ಕುರಿತು ಬರೆದ ಕೃತಿ-ಮಕ್ಕಳ ಪಾಲನೆ. ಜನನಪೂರ್ವ ತಯಾರಿ, ತಂದೆ-ತಾಯಿಯ ಪಾತ್ರ, ಶಿಶು ಆರೈಕೆ, ಹೆದರಿಕೆ ಮತ್ತು ಅಪಾಯದಿಂದ ಮಕ್ಕಳ ರಕ್ಷಣೆ, ಕಿಶೋರ ವಯಸ್ಸು, ಅಂಗವಿಕಲರು, ಅನಾಥ ಮಕ್ಕಳು ಹಾಗೂ ದತ್ತುಪುತ್ರ ಹೀಗೆ ಬೆಳವಣಿಗೆಯ ಹಂತದ ಮಹತ್ವದ ಅಂಶಗಳನ್ನು ಅಧ್ಯಾಯಗಳಾಗಿಸಿ ತಮ್ಮ ವಿಚಾರಗಳ ಪಾಲಕರಿಗೆ ಸಲಹೆ ನೀಡಿದ್ದಾರೆ. ಇಲ್ಲಿಯ ಕೆಲವು ಅಧ್ಯಾಯಗಳು ಸುಧಾ ವಾರಪತ್ರಿಕೆ ಹಾಗೂ ವನಿತಾ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE