ಡಾ. ಕೆ.ಎಸ್. ಪವಿತ್ರ ಅವರ ಕೃತಿ. ಆತಂಕದ ಮನಸ್ಥಿತಿಯ ಕಾಯಿಲೆಗಳು ಹಾಗೂ ಪರಿಹಾರ ಸೂಚಿಸುವ ಕೃತಿ ಇದು. ಮನೋಬೇನೆಯಲ್ಲಿ ಆತಂಕವು ಒಂದು. ಎಲ್ಲರಿಗೂ ಆತಂಕದ ಮನಸ್ಥಿತಿ ಸಾಮಾನ್ಯ. ಆದರೆ, ಅದು ಮಿತಿ ಮೀರಿದರೆ ಮನೋರೋಗವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇಂತಹ ಅಂಶಗಳ ಕುರಿತು ಮಾಹಿತಿಪೂರ್ಣ ಕೃತಿಯನ್ನು ಡಾ. ವಸುಂಧರಾ ಭೂಪತಿ ಅವರು ಸಂಪಾದಿಸಿದ್ದಾರೆ.
ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು. 11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ...
READ MORE