ಸಮಾಜದ ಕೆಲವು ವ್ಯಕ್ತಿಗಳು ಇತರರೊಡನೆ ಬೆರೆಯುವಾಗ, ಮಾತನಾಡುವಾಗ, ವೇದಿಕೆಯಲ್ಲಿ ನಿಂತು ಭಾಷಣ ಮಾಡುವಾಗ, ವ್ಯಕ್ತಿಯಲ್ಲಿ ಮೂಡುವ ಅಧೈರ್ಯ, ಆತಂಕ, ತಲ್ಲಣಗಳು ಕಾಣಸಿಗುತ್ತವೆ. ಅದರಿಂದಾಗಿ ಅನುಭವಿಸುವ ದೈಹಿಕ -ಮಾನಸಿಕ ತೊಂದರೆಗಳು, ಅವುಗಳಿಂದಾಗುವ ದುಷ್ಪರಿಣಾಮ, ಮಾನಸಿಕ ತೊಳಲಾಟದಿಂದ ಹೊರ ಬರುವುದರ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ‘ಗೀಳು’ ರೋಗದ ಬಗ್ಗೆ, ವಿಚಿತ್ರ ಕಾಯಿಲೆಯಾದ ಕೂದಲು ಕಿತ್ತುಕೊಳ್ಳುವ ’ಟ್ರೈಕೊಟೆಲ್ಲೋಮೆನಿಯ” ಮುಂತಾದ ಅನೇಕ ಕಾಯಿಲೆಗಳ ಬಗ್ಗೆ ವಿವರಣೆ ಇಲ್ಲಿದೆ.
ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು. 11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2019